• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಬ್ಯಾಡ್ಮಿಂಟನ್​ ಬೆಳ್ಳಿ ಸಾಧಕಿ ಲಕ್ಷ್ಯ ರಾಜೇಶ್​​ಗೆ ಸಿಎಂ ಅಭಿನಂದನೆ

Sambrama Prabha News by Sambrama Prabha News
November 27, 2025
in Special News
0
ಬ್ಯಾಡ್ಮಿಂಟನ್​ ಬೆಳ್ಳಿ ಸಾಧಕಿ ಲಕ್ಷ್ಯ ರಾಜೇಶ್​​ಗೆ ಸಿಎಂ ಅಭಿನಂದನೆ

Updated By: Priyalachhi

ಬೆಂಗಳೂರು: ಬಾಂಗ್ಲಾದೇಶದ ಢಾಕಾದಲ್ಲಿ ಇತ್ತೀಚೆಗೆ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟಕ್ಕೇರಿದ ಭಾರತ ತಂಡದ ಭಾಗವಾಗಿದ್ದ ರಾಜ್ಯದ ಆಟಗಾರ್ತಿ ಧನಲಕ್ಷ್ಮಿ ಹಾಗೂ ಚೀನಾದಲ್ಲಿ ನಡೆದ ಕಿರಿಯರ ಏಷ್ಯನ್ ಬ್ಯಾಡ್ಮಿಂಟನ್ ಸಿಂಗಲ್ಸ್​​ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ಆಟಗಾರ್ತಿ ಲಕ್ಷ್ಯ ರಾಜೇಶ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿ, ಸನ್ಮಾನಿಸಿದರು.

ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಅವರ ನೇತೃತ್ವದಲ್ಲಿ ಇಬ್ಬರೂ ಕ್ರೀಡಾಪಟುಗಳು ಇಂದು ಸಿಎಂರನ್ನು ಅವರ ಕಚೇರಿಯಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಅಭಿನಂದಿಸಿ, ಸನ್ಮಾನಿಸಿದ ಸಿದ್ದರಾಮಯ್ಯ, ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸಿದರು.

ರಾಜ್ಯ ಮತ್ತು ದೇಶಕ್ಕೆ ಉತ್ತಮ ಹೆಸರು ತರುವ ನಿಟ್ಟಿನಲ್ಲಿ ಇನ್ನಷ್ಟು ಸಾಧನೆ ಮಾಡುವಂತೆಯೂ ಸಿಎಂ ಹಾರೈಸಿದರು. ಇಬ್ಬರೂ ವಿಜೇತಪಟುಗಳಿಗೆ ತಲಾ ಐದು ಲಕ್ಷ ರೂ.ಯ ಚೆಕ್ ವಿತರಿಸುವಂತೆ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ.ಪ್ರಭಾಕರ್, ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ರಾಜೇಶ್ ಮತ್ತು ತರಬೇತುದಾರ ಬಿ.ಎನ್.ಸುಧಾಕರ್ ಉಪಸ್ಥಿತರಿದ್ದರು.

Tags: ಸಿಎಂ
Previous Post

ಡಿಕೆ ಶಿವಕುಮಾರ್ ಗೆ ಅನ್ಯಾಯವಾದರೆ ರಾಜ್ಯಾದ್ಯಂತ ಹೋರಾಟ; ಒಕ್ಕಲಿಗ ಸಂಘ ಎಚ್ಚರಿಕೆ

Next Post

ಕಾನೂನುಬದ್ಧ ಪತಿಗೆ ಮಾತ್ರವಲ್ಲ, ಲಿವ್‌-ಇನ್‌ ಸಂಬಂಧಕ್ಕೂ ಐಪಿಸಿ 498ಎ ಅನ್ವಯ: ಹೈಕೋರ್ಟ್‌

Next Post
ಕಾನೂನುಬದ್ಧ ಪತಿಗೆ ಮಾತ್ರವಲ್ಲ, ಲಿವ್‌-ಇನ್‌ ಸಂಬಂಧಕ್ಕೂ ಐಪಿಸಿ 498ಎ ಅನ್ವಯ: ಹೈಕೋರ್ಟ್‌

ಕಾನೂನುಬದ್ಧ ಪತಿಗೆ ಮಾತ್ರವಲ್ಲ, ಲಿವ್‌-ಇನ್‌ ಸಂಬಂಧಕ್ಕೂ ಐಪಿಸಿ 498ಎ ಅನ್ವಯ: ಹೈಕೋರ್ಟ್‌

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.