• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಬುಧವಾರದ ಪಂಚಾಂಗ-ರಾಶಿ ಭವಿಷ್ಯ

Sambrama Prabha News by Sambrama Prabha News
December 3, 2025
in Latest News
0
ಬುಧವಾರದ ಪಂಚಾಂಗ-ರಾಶಿ ಭವಿಷ್ಯ

Updated By: Priyalachhi

  • ದಿನಾಂಕ : 03-12-2025
  • ವಾರ : ಬುಧವಾರ
  • ಸಂವತ್ಸರ : ವಿಶ್ವವಸು
  • ಆಯನ : ದಕ್ಷಿಣಾಯಣ
  • ಮಾಸ : ಕಾರ್ತಿಕ
  • ಪಕ್ಷ : ಶುಕ್ಲ
  • ತಿಥಿ : ತ್ರಯೋದಶಿ
  • ನಕ್ಷತ್ರ : ಭರಣಿ
  • ಸೂರ್ಯೋದಯ : ಮುಂಜಾನೆ 06:26 ಗಂಟೆಗೆ
  • ಅಮೃತ ಕಾಲ : ಮಧ್ಯಾಹ್ನ 13:32 ರಿಂದ 14:58ರ ವರೆಗೆ
  • ದುರ್ಮುಹೂರ್ತ : ಮಧ್ಯಾಹ್ನ 12:2 ರಿಂದ 12:50ರವರೆಗೆ
  • ರಾಹುಕಾಲ : ಮಧ್ಯಾಹ್ನ 12:07 ರಿಂದ 13:32ರ ವರೆಗೆ
  • ಸೂರ್ಯಾಸ್ತ : ಸಂಜೆ 05:48ಕ್ಕೆ

ರಾಶಿ ಭವಿಷ್ಯ :

ಮೇಷ : ನಿಮ್ಮ ನಿಜವಾದ ಮೌಲ್ಯವೇನೆಂದು ನೀವು ಪ್ರದರ್ಶಿಸಲು ಇಂದು ಸೂಕ್ತವಾದ ದಿನದಂತೆ ಕಾಣುತ್ತದೆ. ಕೆಲಸದ ವಿಷಯದಲ್ಲಿ, ಮಹತ್ತರ ಪ್ರಸ್ತಾವನೆಗಳು ಮತ್ತು ಸೃಜನಶೀಲ ಆಲೋಚೆಗಳಿಂದ ನೀವು ಅತ್ಯಂತ ಉತ್ಸುಕರಾಗಿರುತ್ತೀರಿ. ವಿಷಯಗಳು ಸರಾಗವಾಗಿ ಮುನ್ನಡೆಯದ ತಾತ್ಕಾಲಿಕ ಹಂತವಿರಬಹುದು, ಆದರೆ ಅದರಿಂದ ನೀವು ಭರವಸೆ ಕಳೆದುಕೊಳ್ಳಬೇಕೆಂದು ಅರ್ಥವಲ್ಲ. ನಿಮ್ಮ ಜೀವನದಲ್ಲಿ ಪ್ರವೇಶಿಸುವ ಋಣಾತ್ಮಕತೆಯನ್ನು ಹೊರದೂಡುವಲ್ಲಿ ನೀವು ಯಶಸ್ವಿಯಾದರೆ ನಿರಾಶೆ ಶಾಶ್ವತ ಅತಿಥಿಯಲ್ಲ.

ವೃಷಭ : ಇಂದು ನಿಮ್ಮ ಹಣೆಬರಹ ಏನು ತರುತ್ತದೋ ಅದಕ್ಕೆ ನೀವು ಶರಣಾಗಬೇಕಾದ ದಿನವಾಗಬಹುದು. ಹಾಗೆ ಮಾಡುವಲ್ಲಿ, ನೀವು ನಿಮ್ಮ ದಿನ ಇತರೆ ಯಾವುದೇ ಒಂದು ದಿನದಂತೆ ಎಂದು ಭಾವಿಸಬಹುದು, ಹಾಗಿದ್ದಲ್ಲಿ ಭಯಪಡಬೇಕಾದ ಅಗತ್ಯವಿಲ್ಲ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರುವುದು ಉತ್ತಮ, ಏಕೆಂದರೆ ಅದು ತಪ್ಪಾಗುವ ಸಾಧ್ಯತೆಗಳಿವೆ.

ಮಿಥುನ : ಯಶಸ್ವಿಯಾಗಿ ಮತ್ತು ಯಾವುದೇ ತಡವಿಲ್ಲದೆ ಅಥವಾ ನಿಮ್ಮ ದಾರಿಯಲ್ಲಿ ಅಡೆತಡೆ ಇಲ್ಲದೆ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವುದು ನಿಮಗೆ ಕಷ್ಟವೇನಲ್ಲ, ಅದನ್ನು ಪೂರ್ಣಗೊಳಿಸಲು ಅಗತ್ಯವಾದ ಕಲಿಕೆಯನ್ನು ಮೊದಲಿಗೆ ನೀವು ಅರ್ಥ ಮಾಡಿಕೊಳ್ಳಲು ಮತ್ತು ಪಡೆದುಕೊಳ್ಳಲು ಬಯಸಿದಾಗ ಮಾತ್ರ ಸಾಧ್ಯವಾಗುತ್ತದೆ. ನಿಮ್ಮ ಕಷ್ಟದ ಪ್ರತಿಫಲ ನಿಮಗೆ ಸಂತೋಷ ಮತ್ತು ಸಂತೃಪ್ತಿ ನೀಡುತ್ತದೆ.

ಕರ್ಕಾಟಕ : ನೀವು ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತೀರಿ. ಆದ್ದರಿಂದ ನೀವು ನಿಮ್ಮ ಕೆಲಸದಲ್ಲಿ ವ್ಯಸ್ತರಾಗಿರುತ್ತೀರಿ. ಬಿಡುವಿಲ್ಲದ ಕೆಲಸದಿಂದ ನೀವು ನಿತ್ರಾಣಗೊಳ್ಳುತ್ತೀರಿ. ಆದ್ದರಿಂದ ಅದು ನಿಮಗೆ ಸಾಕಷ್ಟು ಒತ್ತಡ ಮತ್ತು ಆತಂಕ ಉಂಟು ಮಾಡುತ್ತದೆ.

ಸಿಂಹ : ನೀವು ಇಂದು ಅತ್ಯಂತ ಭಾವನಾತ್ಮಕ ಮತ್ತು ಉದ್ವೇಗಕ್ಕೆ ಒಳಗಾಗುತ್ತೀರಿ. ನಿಮ್ಮ ಅಹಂ ಸರಿಯಾದ ಸಮಯದಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸದಂತೆ ತಡೆಯುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂವಹನದ ಪ್ರಯತ್ನ ನಡೆಸುವಾಗ ನೀವು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು ಪ್ರಣಯಕ್ಕೆ ಮತ್ತು ಪ್ರೀತಿಯ ನಿರೀಕ್ಷೆ ಮಾಡುವವರಿಗೆ ಒಳ್ಳೆಯ ದಿನವಾಗಿದೆ.

ಕನ್ಯಾ : ಹಣಕಾಸಿನ ವ್ಯವಹಾರಗಳು ಇಂದು ಪ್ರಮುಖ ಅಡ್ಡಿ ಎದುರಿಸಲಿವೆ. ನೀವು ನಿಮ್ಮ ಬುದ್ಧಿ ಹೃದಯವನ್ನು ಗೆಲ್ಲಲು ಅವಕಾಶ ಕಲ್ಪಿಸಬೇಕು. ನಿಮ್ಮ ಕಾನೂನು ಕರ್ತವ್ಯಗಳಲ್ಲದೆ ಮತ್ತು ಹೊಸ ಯೋಜನೆಗಳಲ್ಲಿ ನಿಮ್ಮ ಮನಸ್ಸಿನಲ್ಲಿ ಅವುಗಳ ದೀರ್ಘಾವಧಿ ಪರಿಣಾಮ ದೃಷ್ಟಿಯಲ್ಲಿರಿಸಿಕೊಂಡು ನಿಮ್ಮ ವೈಯಕ್ತಿಕ ಸ್ವತ್ತುಗಳ ಕುರಿತು ಹೆಚ್ಚುವರಿ ಗಮನ ನೀಡಿ.

ತುಲಾ : ನಿಮ್ಮ ಮಕ್ಕಳು ಮಾಡುವ ಸಾಧನೆ ನಿಮಗೆ ಅವರ ಕುರಿತು ಹೆಮ್ಮೆಯ ಭಾವನೆ ಮೂಡಿಸುತ್ತದೆ. ನೀವು ಹಣಕಾಸಿನ ಅನುಕೂಲವನ್ನು ವೇತನ ಹೆಚ್ಚಳ ಅಥವಾ ಪಿತ್ರಾರ್ಜಿತವಾಗಿ ಪಡೆಯುತ್ತೀರಿ. ರಿಯಲ್ ಎಸ್ಟೇಟ್ ಅಥವಾ ವಿಮಾ ಪಾಲಿಸಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಗಮನಾರ್ಹ ಗಳಿಕೆ ಪಡೆಯುತ್ತೀರಿ.

ವೃಶ್ಚಿಕ : ಇಂದು, ನೀವು ಎಲ್ಲ ಸಮಯದಲ್ಲೂ ಜಾಗರೂಕರಾಗಿರಬೇಕು. ನೀವು ಹರಕೆಯ ಕುರಿಯಾಗುವ ಹೆಚ್ಚಿನ ಸಾಧ್ಯತೆಗಳಿವೆ ಮತ್ತು ಯಾರಿಗೋ ಉದ್ದೇಶಿಸಿದ ಏಟು ನಿಮಗೆ ಬೀಳಬಹುದು. ಎಚ್ಚರಿಕೆಯ ಕಣ್ಣಿನಿಂದ, ನೀವು ನಿಮಗೆ ಮುಜುಗರ ತರುವ ಸನ್ನಿವೇಶದಿಂದ ಪಾರಾಗಬಹುದು. ಆದರೆ, ನಿಮ್ಮ ದಾರಿಯಲ್ಲಿ ಬರುವ ಯಾವುದರಿಂದಲಾದರೂ ನೀವು ಖಂಡಿತವಾಗಿಯೂ ಸಾಕಷ್ಟು ಕಲಿಯುತ್ತೀರಿ.

ಧನು : ನೀವು ಧಾರ್ಮಿಕ ಉತ್ಸಾಹದಿಂದ ಇರುವುದನ್ನು ನಿರೀಕ್ಷಿಸಿ. ಕಾರ್ಯಕ್ರಮ ಅಥವಾ ಉದ್ಘಾಟನೆಗಾಗಿ ನೀವು ಎಲ್ಲರ ಕೇಂದ್ರಬಿಂದುವಾಗಿರುತ್ತೀರಿ. ಪ್ರಯಾಣದ ಸಾಧ್ಯತೆಗಳಿವೆ, ಆದ್ದರಿಂದ ದೂರದ ವ್ಯಾಪಾರ ಪ್ರವಾಸಕ್ಕಾಗಿ ನಿಮ್ಮ ಬ್ಯಾಗ್ ಗಳನ್ನು ಸಜ್ಜುಗೊಳಿಸಿಕೊಳ್ಳಿ.

ಮಕರ : ಮೊದಲ ಪ್ರಯತ್ನದಲ್ಲಿ ನೀವು ಯಶಸ್ವಿಯಾಗದಿದ್ದರೆ ಮತ್ತೆ ಪ್ರಯತ್ನಿಸಿರಿ. ಹಲವು ಮಂದಿ ಅವಿರತ ಪ್ರಯತ್ನ ಮತ್ತು ತಾಳ್ಮೆಯ ಶಕ್ತಿಯನ್ನು ಕಡಿಮೆ ಅಂದಾಜು ಮಾಡುತ್ತಾರೆ. ಆದರೆ ಈ ಎರಡೂ ಗುಣಗಳು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ಕೋಪ ಮತ್ತು ಆತಂಕದಿಂದ ಸಿಡಿಯುವ ಬದಲಿಗೆ, ನಿಮ್ಮ ಯೋಜನೆಗಳ ಮೇಲೆ ಅದರಲ್ಲೂ ನಿಮ್ಮ ಯೋಜನೆಯಂತೆ ಫಲಿತಾಂಶಗಳು ಬಾರದೇ ಇರುವಾಗ ದೃಢವಾದ ನಂಬಿಕೆ ಇರಿಸಿ.

ಕುಂಭ : ನೀವು ಅತ್ಯುತ್ತಮ ಮಟ್ಟದ ತಾಳ್ಮೆ ಮತ್ತು ಪ್ರಾಯೋಗಿಕತೆ ಹೊಂದಿದ್ದೀರಿ, ಮತ್ತು ನೀವು ಯಾವುದೇ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಬಲ್ಲಿರಿ. ಆದಾಗ್ಯೂ, ಇದು ನಿಮ್ಮ ಸುತ್ತಲಿನ ಜನರಿಗೆ ಯಾವುದೇ ಜವಾಬ್ದಾರಿಯಿಂದ ಕೈ ತೊಳೆದುಕೊಳ್ಳಲು ಒಂದು ಕಾರಣ ನೀಡುತ್ತದೆ. ಇದು ನಿಮ್ಮನ್ನು ಅತ್ಯಂತ ಒತ್ತಡದಲ್ಲಿರಿಸಿ ನಿಮ್ಮನ್ನು ನಿರಾಶೆಗೆ ದೂಡುತ್ತದೆ.

ಮೀನ : ನಿಮ್ಮ ತಾಳ್ಮೆ ಮತ್ತು ಸಾಮರ್ಥ್ಯಗಳು ಇಂದು ಪರೀಕ್ಷೆಗೆ ಒಳಪಡುತ್ತವೆ ಮತ್ತು ನೀವು ಕೈಗೊಳ್ಳುವ ಪ್ರತಿ ಕೆಲಸದಲ್ಲಿಯೂ ನಿಮ್ಮನ್ನು ಪರೀಕ್ಷೆಗೆ ಒಡ್ಡುತ್ತವೆ. ಸರಳ ಕೆಲಸಗಳು ಮತ್ತು ಸಾಮಾನ್ಯ ಗುರಿಗಳನ್ನು ಸಾಧಿಸಲೂ ಕಷ್ಟವೆನಿಸುತ್ತವೆ ಮತ್ತು ಪೂರ್ಣಗೊಳಿಸಲು ಗಮನಾರ್ಹ ಪ್ರಮಾಣದ ಪ್ರಯತ್ನ ಅಗತ್ಯವಾಗುತ್ತದೆ, ಇದಕ್ಕೆ ಗ್ರಹಗಳು ಅನುಕೂಲಕರವಾಗಿಲ್ಲದಿರುವುದು ಕಾರಣ.

Tags: ಪಂಚಾಂಗಭವಿಷ್ಯರಾಶಿ
Previous Post

ಸ್ಮಾರ್ಟ್ ಮೀಟರ್ ಟೆಂಡರ್​​ ಹಗರಣದಲ್ಲಿ ಸಚಿವ ಕೆ.ಜೆ ಜಾರ್ಜ್ ​​ಗೆ ರಿಲೀಫ್

Next Post

ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ; ವರ್ಷದಲ್ಲಿ ಎರಡು ಬಾರಿ ಹನುಮ ಜಯಂತಿ ಏಕೆ?

Next Post
ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ; ವರ್ಷದಲ್ಲಿ ಎರಡು ಬಾರಿ ಹನುಮ ಜಯಂತಿ ಏಕೆ?

ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ; ವರ್ಷದಲ್ಲಿ ಎರಡು ಬಾರಿ ಹನುಮ ಜಯಂತಿ ಏಕೆ?

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.