• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಗುರುವಾರದ ಪಂಚಾಂಗ, ರಾಶಿ ಭವಿಷ್ಯ

Sambrama Prabha News by Sambrama Prabha News
December 4, 2025
in Latest News
0
ಗುರುವಾರದ ಪಂಚಾಂಗ, ರಾಶಿ ಭವಿಷ್ಯ

Updated By: Priyalachhi

ಇಂದಿನ ಪಂಚಾಂಗ :

ದಿನಾಂಕ : 04-12-2025

ವಾರ : ಗುರುವಾರ

ಸಂವತ್ಸರ : ವಿಶ್ವವಸು

ಆಯನ : ದಕ್ಷಿಣಾಯಣ

ಮಾಸ : ಕಾರ್ತಿಕ

ಪಕ್ಷ : ಶುಕ್ಲ

ತಿಥಿ : ಚತುರ್ದಶಿ

ನಕ್ಷತ್ರ : ಕೃತಿಕಾ

ಸೂರ್ಯೋದಯ : ಮುಂಜಾನೆ 06:26 ಗಂಟೆಗೆ

ಅಮೃತ ಕಾಲ : ಬೆಳಿಗ್ಗೆ 09:17 ರಿಂದ 10:42ರ ವರೆಗೆ

ದುರ್ಮುಹೂರ್ತ : ಬೆಳಿಗ್ಗೆ 10:26 ರಿಂದ 11:14 ಮತ್ತು 15:14 ರಿಂದ 16:2ರ ವರೆಗೆ

ರಾಹುಕಾಲ : ಮಧ್ಯಾಹ್ನ 13:33 ರಿಂದ 14:58ರ ವರೆಗೆ

ಸೂರ್ಯಾಸ್ತ : ಸಂಜೆ 05:49ಕ್ಕೆ

ರಾಶಿ ಭವಿಷ್ಯ :

ಮೇಷ : ನೀವು ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ನೀವು ಕಠಿಣ ಹೋರಾಟ ನಡೆಸಿದರೂ ಅದು ನಿಮಗೆ ಪೂರಕವಾಗುವುದಿಲ್ಲವಾದ್ದರಿಂದ ಹಾಗೆ ಮಾಡಬೇಡಿ. ವಿಶ್ರಾಂತಿಗೆ ಕೊಂಚ ಸಮಯ ತೆಗೆದುಕೊಳ್ಳಿ. ಏಕೆಂದರೆ, ನೀವು ಏನೇ ಮಾಡಿದರೂ ವಿಷಯಗಳು ನಿಮ್ಮತ್ತ ಸಾಗಿ ಬರುವುದಿಲ್ಲ.

ವೃಷಭ : ಇಂದು ಅತಿಯಾದ ಆಲೋಚನೆ ಮತ್ತು ಅತಿಯಾದ ಒತ್ತಡ ತಂದುಕೊಳ್ಳಬೇಡಿ. ನಿಮ್ಮ ಸ್ವಾಮ್ಯತೆಯ ಸ್ವಭಾವ ಮತ್ತು ಕೋಪ ಅನಗತ್ಯ ಜಗಳಗಳಿಗೆ ಕಾರಣವಾಗಬಹುದು. ನೀವು ಆತ್ಮಾವಲೋಕನ ಮಾಡಲು ಆಲೋಚಿಸುತ್ತೀರಿ, ಏಕೆಂದರೆ ಅದೊಂದೇ ನಿಮ್ಮ ಬಹುತೇಕ ಸಮಸ್ಯೆಗಳಿಗೆ ಉತ್ತರ ತಂದುಕೊಡುವ ದಾರಿಯಾಗಿದೆ.

ಮಿಥುನ : ನಿಮ್ಮ ಸಾಮಾಜಿಕ ವೃತ್ತದ ಜನರು ನಿಮ್ಮನ್ನು ನಾಯಕತ್ವದ ಮತ್ತು ಎಲ್ಲರನ್ನೂ ನಿರ್ದೇಶಿಸುವ ವ್ಯಕ್ತಿಯಾಗಿ ಕಾಣುತ್ತಾರೆ. ನಿಮಗೆ ನಿಮ್ಮ ಹೃದಯ ಏನನ್ನು ಬಯಸುತ್ತದೋ ಅದನ್ನು ಪಡೆಯುವಲ್ಲಿ ನೀವು ಗಮನ ನೀಡಿರಬಹುದು. ಕೆಲ ಕಾಲದಿಂದ ಉತ್ತರ ದೊರೆಯದೆ ಉಳಿದ ಅನುಮಾನಗಳಿಗೆ ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನೀವು ಯಶಸ್ವಿಯಾಗಬಹುದು.

ಕರ್ಕಾಟಕ : ದೇವರ ಆಶೀರ್ವಾದ ನಿಮಗೆ ಇಂದು ಯಶಸ್ಸು ಗಳಿಸಲು ನೆರವಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಅವರ ಪೂರ್ಣಗೊಳ್ಳದ ಕಾರ್ಯಗಳನ್ನು ಮುಗಿಸಿ ಇತರರಿಗಿಂತ ಉತ್ತಮ ಸಾಧನೆ ಮಾಡಲು ಸುವರ್ಣ ಸಮಯವಾಗಿದೆ. ಕಲ್ಪನಾಶಕ್ತಿ ಕಾಡಿನ ಬೆಂಕಿಯಂತೆ ನಿಮ್ಮಲ್ಲಿ ಉರಿಯುತ್ತಿದೆ ಮತ್ತು ಇಂದು ಎಲ್ಲವೂ ನಿಮ್ಮ ದಾರಿಯಲ್ಲಿ ಮುನ್ನಡೆಯುವಂತೆ ಕಾಣುತ್ತಿವೆ.

ಸಿಂಹ : ನೀವು ಮನೆಯಲ್ಲಿನ ವಿಷಯಗಳಿಗೆ ಹೆಚ್ಚು ಗಮನ ನೀಡುತ್ತೀರಿ. ನೀವು ಮನೆ ನವೀಕರಣ ಯೋಜನೆಗಳನ್ನು ಕೈಗೊಳ್ಳಬಹುದು. ನಿಮ್ಮ ಸ್ಥಳವೂ ಒಳಗೊಂಡು ಇಡೀ ಪೀಠೋಪಕರಣ ಬದಲಾಯಿಸುತ್ತೀರಿ. ನಿಮ್ಮ ಕುಟುಂಬ ಸದಸ್ಯರು ಮತ್ತು ಮಿತ್ರರೊಂದಿಗೆ ದಿನವನ್ನು ಆನಂದಿಸುತ್ತಾ ಕಳೆಯುತ್ತೀರಿ.

ಕನ್ಯಾ : ನಿಮ್ಮ ಹೃದಯದಾಳದಲ್ಲಿ ಹುದುಗಿದ್ದ ಭಾವನೆಗಳು ಇಂದು ಹೊರಬೀಳಲಿವೆ. ನೀವು ನಿಮ್ಮ ವಸ್ತುಗಳ ಕುರಿತು ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಳ್ಳುತ್ತೀರಿ. ಆದಾಗ್ಯೂ, ನಿಮ್ಮ ಸುತ್ತಮುತ್ತಲಿನ ಪರಿಸರ ಅನುಕೂಲಕರವಾಗಿಲ್ಲದಿದ್ದರೆ ನೀವು ಅತ್ಯಂತ ಪ್ರಕ್ಷುಬ್ದತೆ ಅನುಭವಿಸುತ್ತೀರಿ.

ತುಲಾ : ವಿವಾಹಿತರು ಅಥವಾ ಪ್ರೀತಿಯಲ್ಲಿರುವ ನೀವು ಇಂದು ಒಳ್ಳೆಯ ಸಮಯ ಅನುಭವಿಸುತ್ತೀರಿ. ನಿಮ್ಮ ಜೀವನ ಸಂಗಾತಿಯೊಂದಿಗೆ ಡ್ರೈವ್ ಹೋಗುವ ಅಥವಾ ಡಿನ್ನರ್ ಗೆ ಕರೆದೊಯ್ಯುವ ಮೂಲಕ ಹೆಚ್ಚು ಸಮಯ ಕಳೆದಂತೆ ನೀವು ಅವರಿಗೆ ಹತ್ತಿರವಾಗುತ್ತೀರಿ. ಇಂದು ನಿಮಗೆ ಸಂಪೂರ್ಣ ಸಂತೋಷ, ಹುರುಪು ಮತ್ತು ಆನಂದದ ದಿನವಾಗಿದೆ.

ವೃಶ್ಚಿಕ : ಭಾರತದ ಪವಿತ್ರಗ್ರಂಥಗಳು ನಮಗೆ ಅನಾದಿ ಕಾಲದಿಂದಲೂ ನಿಮ್ಮ ಕಾರ್ಯವನ್ನು ನೀವು ಮಾಡಿ, ಫಲಾಫಲಗಳ ನಿರೀಕ್ಷೆ ಮಾಡಬೇಡಿ ಎಂದು ಹೇಳಿವೆ. ಈಗ ಅದನ್ನು ಮುಖ್ಯವಾಗಿ ಕೆಲಸದಲ್ಲಿ ಅನುಷ್ಠಾನಗೊಳಿಸುವ ಕಾಲ. ನಿಮ್ಮ ವ್ಯಾಪಾರ ಮತ್ತು ಜಂಟಿ ಸಹಯೋಗದ ಉದ್ಯಮದಲ್ಲಿ ಕೊಂಚ ಹೆಚ್ಚು ಕಾಯಬೇಕಾಗಬಹುದು. ಆದಾಗ್ಯೂ, ತಾಳ್ಮೆ ನೀಡುವ ಪ್ರತಿಫಲ ಸಿಹಿಯಾಗಿರುವುದರಿಂದ ಭರವಸೆ ಕಳೆದುಕೊಳ್ಳಬೇಡಿ.

ಧನು : ನಿಮ್ಮ ಸುತ್ತಲೂ ಇರುವ ಪರೋಪಕಾರಿಗಳು ಅಪೇಕ್ಷಿಸದ, ಆದರೆ ಮೌಲ್ಯಯುತ ಸಲಹೆ ನೀಡಬಹುದು. ಅದನ್ನು ಸೂಚನೆಯನ್ನಾಗಿ ತೆಗೆದುಕೊಳ್ಳಿ, ಮತ್ತು ಅದನ್ನು ನಿಮ್ಮ ಸುಧಾರಣೆಗೆ ಬಳಸಿಕೊಳ್ಳಿ. ಸಲಹೆ ಅನುಸರಿಸಿದ ನಂತರ ನಿಮ್ಮ ತೀರ್ಮಾನ ಕೈಗೊಳ್ಳಿರಿ, ಮತ್ತು ಇದು ಅನುಮಾನವಿಲ್ಲದೆ ಅನುಕೂಲಗಳನ್ನು ತಂದುಕೊಡುತ್ತದೆ.

ಮಕರ : ಎಲ್ಲ ದಿನಗಳೂ ಒಂದೇ ರೀತಿಯಲ್ಲಿರುವುದಿಲ್ಲ. ಮತ್ತು, ಇಂದು ಅತ್ಯಂತ ಗೊಂದಲದ ಭಾವನೆಗೆ ಒಳಗಾದ ದಿನವಾಗಿದೆ. ನೀವು ಋಣಾತ್ಮಕ ಭಾವನೆಗಳಿಂದ ಹೊರಬರಲು ಸಾಧ್ಯವಿಲ್ಲ, ನಿಮ್ಮ ಕಠಿಣ ಪರಿಶ್ರಮ ಫಲ ನೀಡುತ್ತದೆ ಮತ್ತು ಭವಿಷ್ಯಕ್ಕೆ ಬಲವಾದ ತಳಹದಿ ನಿರ್ಮಿಸುತ್ತದೆ.

ಕುಂಭ : ಸಮಾಜದ ವಿವಿಧ ವಲಯಗಳನ್ನು ಜನರ ಭೇಟಿ, ಅವರೊಂದಿಗೆ ಒಳ್ಳೆಯ ಮಾತುಕತೆ ಮತ್ತು ನಿಮ್ಮ ಜ್ಞಾನದ ವಿಸ್ತರಣೆ-ಇವು ಇಂದು ನಿಮಗಾಗಿ ಇರುವ ಪ್ರಮುಖಾಂಶಗಳು. ನಿಮ್ಮ ಶಕ್ತಿಗಳನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳುತ್ತೀರಿ, ಆದರೆ ಇದು ನಿಮ್ಮನ್ನು ಸುಸ್ತಾಗಿಸಲೂಬಹುದು.

ಮೀನ : ವ್ಯಾಪಾರದಲ್ಲಿ ನೀವು ಎದುರಿಸುತ್ತಿರುವ ಅಡೆತಡೆಗಳಿಂದ ತಳಮಳಗೊಳ್ಳುತ್ತಿದ್ದೀರಾ? ನಿಮ್ಮ ಸಮಸ್ಯೆಯ ಮೂಲವನ್ನು ಎದುರಿಸಿ ಮತ್ತು ನಿಮ್ಮ ಹೊಣೆಗಾರಿಕೆಗಳ ಕುರಿತು ತಾಳ್ಮೆ ಮತ್ತು ನಂಬಿಕೆ ಇಟ್ಟುಕೊಳ್ಳಿ. ನಿಮ್ಮ ದಾರಿಯಲ್ಲಿ ಒಳ್ಳೆಯ ವಿಷಯಗಳು ಹಾಗೂ ಒಳ್ಳೆಯ ಸಮಯ ಬರುತ್ತದೆ.

Tags: ಗುರುವಾರದಪಂಚಾಂಗಭವಿಷ್ಯರಾಶಿ
Previous Post

BJPಯಲ್ಲೂ ನಾಯಕತ್ವ ಗದ್ದಲ: ರೆಬೆಲ್ಸ್ ಟೀಮ್ ಮತ್ತೆ ಆಕ್ಟಿವ್; ದೆಹಲಿಗೆ ಪ್ರಯಾಣ!

Next Post

ಎರಡೂವರೆ ವರ್ಷಗಳಲ್ಲಿ ಮಂಡ್ಯ ಅಭಿವೃದ್ಧಿಗೆ 10 ಸಾವಿರ ಕೋಟಿ ಅನುದಾನ : ಸಚಿವ ಚಲುವರಾಯಸ್ವಾಮಿ

Next Post
ಎರಡೂವರೆ ವರ್ಷಗಳಲ್ಲಿ ಮಂಡ್ಯ ಅಭಿವೃದ್ಧಿಗೆ 10 ಸಾವಿರ ಕೋಟಿ ಅನುದಾನ : ಸಚಿವ ಚಲುವರಾಯಸ್ವಾಮಿ

ಎರಡೂವರೆ ವರ್ಷಗಳಲ್ಲಿ ಮಂಡ್ಯ ಅಭಿವೃದ್ಧಿಗೆ 10 ಸಾವಿರ ಕೋಟಿ ಅನುದಾನ : ಸಚಿವ ಚಲುವರಾಯಸ್ವಾಮಿ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.