Updated By: Priyalachhi
ದಾವೋಸ್(ಸ್ವಿಡ್ಜರ್ಲಾಂಡ್): ಜಾಗತಿಕ ಹೂಡಿಕೆದಾರರಲ್ಲಿ ದೇಶದ ಅಗ್ರ ಹೂಡಿಕೆ ತಾಣವಾಗಿ ಕರ್ನಾಟಕದ ಸಾಮರ್ಥ್ಯದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಾವೋಸ್ ನಲ್ಲಿ ಮಾತನಾಡಿದ್ದಾರೆ. ಜಗತ್ತು ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತದೆ ಎಂದು ಹೇಳಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಸಂದರ್ಭದಲ್ಲಿ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಡಿ ಕೆ ಶಿವಕುಮಾರ್, ದಾವೋಸ್ ನಲ್ಲಿ ಕಲಿಯಲು ಬಹಳಷ್ಟು ವಿಷಯಗಳಿವೆ. ಪ್ರಪಂಚದಾದ್ಯಂತದ ವಿವಿಧ ನಾಯಕರನ್ನು ನಾನು ಈ ಸಭೆಯಲ್ಲಿ ಭೇಟಿ ಮಾಡಿದ್ದೇನೆ. ಬೆಂಗಳೂರಿನ ಮೂಲಕ ಭಾರತವನ್ನು ವಿಶ್ವದ ನಾಯಕರು ನೋಡುತ್ತಿದ್ದಾರೆ ಎಂದರು.
ಈ ವಿಶ್ವ ಆರ್ಥಿಕ ವೇದಿಕೆಯಲ್ಲಿ ನಾನು ಅವರಿಗೆ ಕರ್ನಾಟಕದ ಮಹತ್ವವನ್ನು ಮತ್ತು ಅದು ಕೆಲಸ ಮಾಡಲು ಉತ್ತಮ ರಾಜ್ಯ ಎಂದು ಸಾರುತ್ತಿದ್ದೇನೆ ಎಂದರು.
