• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಬಿವೈವಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದರೆ ಇಡೀ ಬಣ್ಣವನ್ನು ವಿಸ್ತಾರವಾಗಿ ಕೋರ್ಟ್​ಗೆ ತಿಳಿಸುತ್ತೇನೆ: ಶಾಸಕ ಯತ್ನಾಳ್​

Sambrama Prabha News by Sambrama Prabha News
December 15, 2025
in Politics
0
ಬಿವೈವಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದರೆ ಇಡೀ ಬಣ್ಣವನ್ನು ವಿಸ್ತಾರವಾಗಿ ಕೋರ್ಟ್​ಗೆ ತಿಳಿಸುತ್ತೇನೆ: ಶಾಸಕ ಯತ್ನಾಳ್​

Updated By: Priyalachhi

ಚಿಕ್ಕೋಡಿ: “ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದರೆ ಬಹಳ ಚಲೋ. ಅದು ಮಾಡಿ ಬಿಟ್ಟರೆ ಇಡೀ ಬಣ್ಣವನ್ನು ಅತ್ಯಂತ ವಿಸ್ತಾರವಾಗಿ ಕೋರ್ಟ್​ಗೆ ತಿಳಿಸುತ್ತೇನೆ” ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಬಿ.ವೈ. ವಿಜಯೇಂದ್ರ ಅವರ ಎಚ್ಚರಿಕೆ ಮಾತಿಗೆ ಮರು ಸವಾಲು ಹಾಕಿದರು.

ಶಾಸಕ ಯತ್ನಾಳ್ ಪದೇ ಪದೇ ನನ್ನ ಹಾಗೂ ನಮ್ಮ ಕುಟುಂಬ ವಿರುದ್ಧ ಮಾತನಾಡುತ್ತಿದ್ದರೆ ನಾನು ಮಾನನಷ್ಟ ಮೊಕದ್ದಮೆ ದಾಖಲು ಮಾಡೋದಕ್ಕೆ ಚಿಂತನೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದ ವಿಚಾರಕ್ಕೆ ಚಿಕ್ಕೋಡಿ ಈಟಿವಿ ಭಾರತ ಪ್ರತಿನಿಧಿ ಶಿವರಾಜ್ ನೇಸರಗಿ ಜೊತೆ ಯತ್ನಾಳ್​ ಮಾತನಾಡುತ್ತಾ, “ವಿಜಯೇಂದ್ರ ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಿ. ಎಲ್ಲವನ್ನು ನಾನು ನ್ಯಾಯಾಲಯದಲ್ಲಿ ವಿಸ್ತಾರವಾಗಿ ವಿವರಣೆ ನೀಡುತ್ತೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ವಿಜಯೇಂದ್ರ, ಡಿ.ಕೆ. ಶಿವಕುಮಾರ್​ ಸರ್ಕಾರ ರಚನೆಗೆ ಮುಂದಾಗಿದ್ದರು. ಆದರೆ ಇವತ್ತು ಮುಗಿದ ಹೊಗಿರುವ ಕತೆ. ಮೇಲಿನವರು ಒಪ್ಪದ ಕಾರಣ ಈ ಪ್ರಶ್ನೆ ಉದ್ಬವಿಸುವುದಿಲ್ಲ. ಕಾಂಗ್ರೆಸ್ ಯಾವುದೇ ಗುಂಪು ಬಂದರು ಸರ್ಕಾರ ರಚನೆ ಮಾಡುವುದಿಲ್ಲ ಎಂದು ತಿರ್ಮಾನ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಅವರು ಹೇಳಿಕೆ ಕೊಟ್ಟಿದ್ದಾರೆ. ಇದು ಮುಗಿರುವ ಅಧ್ಯಾಯ, ಸದ್ಯಕ್ಕೆ ಕಾಂಗ್ರೆಸ್​ ಪಕ್ಷದಲ್ಲಿ ಯಾರು ಸಿಎಂ ಆಗಬೇಕು ಎಂಬುದು ಗೊಂದಲ ನಡೆಯುತ್ತಿದೆ” ಎಂದರು.

“ಪ್ರತಿ ವರ್ಷ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಕೊನೆಯ ಎರಡು ದಿನ ಚರ್ಚೆ ಆಗುತಿತ್ತು. ಇದರಿಂದ ಈ ಭಾಗಕ್ಕೆ ನ್ಯಾಯ ಸಿಗುವುದಿಲ್ಲ ಎಂದು ಸ್ಪೀಕರ್​ ಯು.ಟಿ. ಖಾದರ್ ಅವರಿಗೆ ಮೊದಲೇ ಎರಡು ದಿನ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡುವಂತೆ ಮನವಿ ಸಲ್ಲಿಸಿದ್ದೆ. ಇದರ ಪರಿಣಾಮವಾಗಿ ಮೊದಲಿಗೆ ಚರ್ಚೆ ಬಂದಿದೆ. ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಡೆಯುತ್ತಿದೆ. ಹೋರಾಟ ಮಾಡಬೇಕು ಮಾಡುತ್ತಾ ಇದ್ದೇವೆ. ಈ ವರ್ಷ ಆಗದ ಕೆಲಸಗಳನ್ನು ಮುಂದಿನ ಸಲ ಸದನಕ್ಕೆ ನೆನಪು ಮಾಡುವ ಕೆಲಸವನ್ನು ಮಾಡುತ್ತೇನೆ” ಎಂದು ಭರವಸೆ ನೀಡಿದರು.

ಬೆಳಗಾವಿಯಲ್ಲಿ ಮೂರು ಜಿಲ್ಲೆ ಆಗಬೇಕು: “ನಾನು ಬಿಜೆಪಿಗೆ ಮರಳಿ ಹೋಗುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಕೊಂಡಿಲ್ಲ. ಬಿಜೆಪಿ ಶಾಸಕರು ಬನ್ನಿ ಎನ್ನುತ್ತಿದ್ದಾರೆ. ನನಗೆ ಗೌರವಿತ ಸ್ಥಾನ ಕೊಟ್ಟರೆ ಮಾತ್ರ ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ” ಎಂದ ಯತ್ನಾಳ್​ ಅವರು ಬೆಳಗಾವಿ ವಿಭಜನೆ ವಿಚಾರವಾಗಿ ಮಾತನಾಡಿ, “ಅಥಣಿ ಜಿಲ್ಲಾ ರಚನೆಗೆ ಸ್ಥಳೀಯ ಶಾಸಕರ ಒತ್ತಾಯವಾಗಿದೆ. ಅಖಂಡ ಕರ್ನಾಟಕ ಬೇಕು. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ನನ್ನ ಬೆಂಬಲವಿಲ್ಲ. ನಮಗೆ ಆಗಿರುವ ಅನ್ಯಾಯ ಬಗ್ಗೆ ಮರಳಿ ನ್ಯಾಯ ಪಡೆಯಬೇಕು. ಇಲ್ಲಿ ಉತ್ತರ ಕರ್ನಾಟಕದ ಶಾಸಕರು ಆಯ್ಕೆ ಆಗುತ್ತಾರೆ ನಂತರ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಅಥಣಿ ಜಿಲ್ಲಾ ರಚನೆಗೆ ಬೇಡಿಕೆ ಇಟ್ಟಿದ್ದಾರೆ. ವಿಜಯಪುರಕ್ಕೆ ಸೇರುವ ಕೆಲವರು ಹೇಳುತ್ತಿದ್ದಾರೆ. ನಾನು ಏನೇ ಮಾತನಾಡಿದರು ಗೊಂದಲಕ್ಕೆ ಕಾರಣವಾಗುತ್ತದೆ. ಜಮಖಂಡಿ, ಅಥಣಿ ಜಿಲ್ಲಾ ರಚನೆಗೆ ಮಾತು ಇದೆ. ಬೆಳಗಾವಿಯಲ್ಲಿ ಮೂರು ಜಿಲ್ಲೆ ಆಗಬೇಕು. ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದೆ. ಇಲ್ಲಿ ಹಲವಾರು ಜನರು ತಮ್ಮ ಜಿಲ್ಲೆಗೆ ಬೇಡುತಿದ್ದಾರೆ. ಕೆಲವರು ಅಥಣಿ, ಗೋಕಾಕ್​, ಚಿಕ್ಕೋಡಿ ಬೇಡುತಿದ್ದಾರೆ. ಈ ಬಗ್ಗೆ ಸೂಕ್ತವಾಗಿ ನಿರ್ಣಯ ಮಾಡಬೇಕು. ಒಂದು ಕಮಿಟಿ ಮಾಡಿಕೊಂಡು 70 ಕಿ.ಮಿ ವ್ಯತ್ಯಾಸ ಇಟ್ಟುಕೊಂಡು ಜಿಲ್ಲೆ ರಚನೆ ಆಗಬೇಕು” ಎಂದರು.

Tags: ಬಿವೈವಿಯತ್ನಾಳ್​
Previous Post

ಜಿಬಿಎ ಚುನಾವಣೆಗೆ ಸೋಮವಾರದಿಂದ 369 ವಾರ್ಡ್ ಆಕಾಂಕ್ಷಿಗಳ ಅರ್ಜಿ ಸ್ವೀಕಾರ: ಡಿಸಿಎಂ

Next Post

ವಿವಾದದ ನಡುವೆ ದರ್ಶನ್​​​ ಸಿನಿಮಾ ಗೆಲ್ಲಿಸಿಕೊಟ್ಟ ಅಭಿಮಾನಿಗಳು

Next Post
ವಿವಾದದ ನಡುವೆ ದರ್ಶನ್​​​ ಸಿನಿಮಾ ಗೆಲ್ಲಿಸಿಕೊಟ್ಟ ಅಭಿಮಾನಿಗಳು

ವಿವಾದದ ನಡುವೆ ದರ್ಶನ್​​​ ಸಿನಿಮಾ ಗೆಲ್ಲಿಸಿಕೊಟ್ಟ ಅಭಿಮಾನಿಗಳು

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.