• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ರಾಜ್ಯದಲ್ಲಿ ಮತ್ತೆ ಭೂಕಂಪನ

Sambrama Prabha News by Sambrama Prabha News
November 4, 2025
in Latest News, Politics
0
ರಾಜ್ಯದಲ್ಲಿ ಮತ್ತೆ ಭೂಕಂಪನ

Updated By: Priyalachhi

ವಿಜಯಪುರ: ಉತ್ತರ ಕರ್ನಾಟಕದ ವಿಜಯಪುರ (Vijayapura) ಜಿಲ್ಲೆಯಲ್ಲಿ ಮತ್ತೊಮ್ಮೆ ಭೂಕಂಪನ (Earthquake) ಸಂಭವಿಸಿದೆ. ಬೆಳಿಗ್ಗೆ 7:49ರ ಸುಮಾರಿಗೆ ಭಾರೀ ಸ್ಪೋಟದ‌ ಸದ್ದಿನೊಂದಿಗೆ ಭೂಮಿ (Earth) ನಡುಗಿದೆ. ಜನರು ಬೆಳಗ್ಗೆಯೇ ಭೂಮಿ ನಡುಗುತ್ತಿರುವ ಅನುಭವ ಪಡೆದಿದ್ದಾರೆ. ಭಾರೀ ಸ್ಫೋಟದಂತಹ ಜೋರಾದ ಧ್ವನಿಯೊಂದಿಗೆ ಭೂಮಿ ಕಂಪಿಸಿದ್ದು, ಸ್ಥಳೀಯರು ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದಾರೆ. ಇದು ಕಳೆದ ಎರಡು ತಿಂಗಳಲ್ಲಿ 13ನೇ ಬಾರಿಗೆ ಭೂಕಂಪನ ಸಂಭವಿಸಿದ್ದು, ಜನರು ಕಂಗಾಲಾಗಿದ್ದಾರೆ.

ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಇಂತಹ ಭೂಕಂಪನಗಳು ಸಂಭವಿಸುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಸರಣಿ ಭೂಕಂಪನದಿಂದ ಕಂಗೆಟ್ಟ ಜನ ಭಯದಲ್ಲಿದ್ದಾರೆ, ಭೂಮಿ ನಡುಗಿದ ಶಬ್ಧದಿಂದ ಬೆಚ್ಚಿಬಿದ್ದಿದ್ದಾರೆ.

ವಿಜಯಪುರದಲ್ಲಿ ಬೆಳಗ್ಗೆಯೇ ಭೂಕಂಪನ!

ಇಂದು ಸುಮಾರು ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಕಂಪನ ಸಂಭವಿಸಿರುವ ಸಾಧ್ಯತೆ ಇದೆ. ಈ ಕಂಪನವು ವಿಜಯಪುರ ನಗರ, ತಿಕೋಟ, ಕಳ್ಳಕವಟಗಿ, ತೊರವಿ, ಶಿವಗಿರಿ, ಹೊನ್ನೂಟಗಿ ಸೇರಿದಂತೆ ತಾಲೂಕುಗಳಲ್ಲಿ ಅನುಭವವಾಗಿದೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ವೀಡಿಯೋಗಳು ಭೂಕಂಪನದ ತೀವ್ರತೆಯನ್ನು ತೋರಿಸುತ್ತಿವೆ. ಭಾರೀ ಸ್ಪೋಟದ‌ ಸದ್ದಿನೊಂದಿಗೆ ಭೂಮಿ ನಡುಗಿದ ದೃಶ್ಯ ಮತ್ತು ಶಬ್ಧ ಎರಡು ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಿಸದೆ.

ಭಾರೀ ಸ್ಫೋಟದ ಶಬ್ಧದೊಂದಿಗೆ ನಡುಗಿದ ಭೂಮಿ!

ಭೂಕಂಪನದ ಸಮಯದಲ್ಲಿ ಜನರು ಭೂಮಿ ನಡುಗುತ್ತಿರುವಂತೆ ಭಾಸವಾಯಿತು. “ಭಾರೀ ಸ್ಫೋಟದಂತಹ ಧ್ವನಿ ಕೇಳಿ, ಗೋಡೆಗಳು ನಡುಗಿದಂತೆ ಆಯಿತು. ಭಯಪಟ್ಟು ಮಕ್ಕಳನ್ನು ಕರೆದುಕೊಂಡು ಹೊರಬಂದೆವು” ಎಂದು ವಿಜಯಪುರ ನಗರದ ನಿವಾಸಿಗಳು ಹೇಳಿದ್ದಾರೆ. ತಿಕೋಟ ತಾಲೂಕಿನ ಕಳ್ಳಕವಟಗಿಯಲ್ಲಿ ಸಹ ಜನರು ಭಯಭೀತರಾಗಿ ರಸ್ತೆಗೆ ಓಡಿದ್ದಾರೆ. ಸಿಸಿಟಿವಿ ಫೂಟೇಜ್‌ಗಳಲ್ಲಿ ಜೋರಾದ ಧ್ವನಿ ಮತ್ತು ಕಂಪನದ ಸೆರೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಿವೆ. ಭೂಕಂಪನ ಆಪ್‌ಗಳಾದ ಇರಿಸ್ ಅಥವಾ ಮೈಈರ್ಥ್‌ಕ್ವೇಕ್‌ನಲ್ಲಿ ಈ ಘಟನೆ ದಾಖಲಾಗಿದ್ದು, ತೀವ್ರತೆ 3.1 ಆಗಿದೆ. ಆಳ ಸುಮಾರು 10 ಕಿ.ಮೀ. ಎಂದು ತಿಳಿದುಬಂದಿದೆ. ಈಗಾಗಲೇ ಕರ್ನಾಟಕ ಸ್ಟೇಟ್ ನ್ಯಾಚರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ (ಕೆಎಸ್‌ಎನ್‌ಡಿಎಂಸಿ) ಈ ಮಾಹಿತಿಯನ್ನು ದೃಢಪಡಿಸಿದ್ದು, “ಇದು ಸಣ್ಣ ತೀವ್ರತೆಯದ್ದು, ಯಾವುದೇ ಹಾನಿ ಉಂಟಾಗಿಲ್ಲ” ಎಂದು ಭರವಸೆ ನೀಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಇದು 13ನೇ ಭೂಕಂಪನ. ಅಕ್ಟೋಬರ್‌ನಲ್ಲಿ 2.9 ತೀವ್ರತೆಯ ಕಂಪನವು ಹಟ್ಟರಕಿಹಾಳ್ ಗ್ರಾಮದ ಬಳಿ ಸಂಭವಿಸಿತ್ತು. ಸೆಪ್ಟೆಂಬರ್‌ನಲ್ಲಿ 2.5 ತೀವ್ರತೆಯ ಭೂಕಂಪವು ಕಲಬುರಗಿ ಸಮೀಪದಲ್ಲಿ ಅನುಭವವಾಗಿತ್ತು. ಈ ಸರಣಿ ಭೂಕಂಪನಗಳು ಜನರಲ್ಲಿ ಭಯವನ್ನು ಹೆಚ್ಚಿಸಿವೆ. ಹಿಂದೆ ಒಂದು ವರ್ಷಕ್ಕೊಮ್ಮೆ ಬರುತ್ತಿತ್ತು, ಈಗ ಎಲ್ಲ ದಿನ ಕಂಪನ. ಮನೆಗಳು ಸುರಕ್ಷಿತನಾ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Tags: EarthVijayapuraವಿಜಯಪುರ
Previous Post

ಅಭಿಮಾನಿಗಳ ‘D Boss’ ಘೋಷಣೆ ಇರಿಸು ಮುರಿಸು; ಅರ್ಧಕ್ಕೆ ಮಾತು ನಿಲ್ಲಿಸಿದ ನಟಿ ರಚಿತಾ ರಾಮ್!

Next Post

ನಿಮ್ಮ ಪ್ಯಾನ್​ ಕಾರ್ಡ್​ಗೆ ಆಧಾರ್​ ಲಿಂಕ್​ ಆಗಿಲ್ಲವೇ? ಹಾಗಾದ್ರೆ ಪ್ಯಾನ್​ ಕ್ಯಾನ್ಸಲ್​ ಆಗೋದು ಖಚಿತ!!

Next Post
ನಿಮ್ಮ ಪ್ಯಾನ್​ ಕಾರ್ಡ್​ಗೆ ಆಧಾರ್​ ಲಿಂಕ್​ ಆಗಿಲ್ಲವೇ? ಹಾಗಾದ್ರೆ ಪ್ಯಾನ್​ ಕ್ಯಾನ್ಸಲ್​ ಆಗೋದು ಖಚಿತ!!

ನಿಮ್ಮ ಪ್ಯಾನ್​ ಕಾರ್ಡ್​ಗೆ ಆಧಾರ್​ ಲಿಂಕ್​ ಆಗಿಲ್ಲವೇ? ಹಾಗಾದ್ರೆ ಪ್ಯಾನ್​ ಕ್ಯಾನ್ಸಲ್​ ಆಗೋದು ಖಚಿತ!!

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.