ಪ್ರಕಾಶ್​ ರಾಜ್, ಪೌರ ಕಾರ್ಮಿಕೆ ಫಕ್ಕೀರಿ​ ಸೇರಿ 70 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೌರವ

0
48
kannada rajotsava aword
kannada rajotsava aword

ಬೆಂಗಳೂರು: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇಂದು ಪ್ರಕಟಗೊಂಡಿದೆ. ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ಬೆಂಗಳೂರಿನ ಪೌರ ಕಾರ್ಮಿಕರಾದ ಫಕ್ಕೀರಿ, ಬಹುಭಾಷಾ ನಟ ಪ್ರಕಾಶ್ ರಾಜ್​, ನಿವೃತ್ತ ಐಐಎಸ್ ಅಧಿಕಾರಿ ಸಿದ್ದಯ್ಯ ಸೇರಿದಂತೆ 70 ಮಂದಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಮಾತನಾಡಿ, “ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ, ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ 2,116 ಅರ್ಜಿಗಳು ಬಂದಿದ್ದವು. ಈ ಪಟ್ಟಿಯಲ್ಲಿ ಪ್ರಶಸ್ತಿಗೆ ಅರ್ಹರಿದ್ದವರನ್ನು ಆಯ್ಕೆ ಮಾಡಲಾಗಿದೆ. ಅರ್ಜಿ ಹಾಕದ ಶೇ.80ರಷ್ಟು ಸಾಧಕರನ್ನು ಗುರುತಿಸಲಾಗಿದೆ” ಎಂದರು.

“ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಆಯ್ಕೆ ನಡೆದಿದೆ.‌ ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸು ಮಾಡಿದವರನ್ನು ಬಹುತೇಕ‌‌ ಆಯ್ಕೆ ಮಾಡಲಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯಕ್ಕೆ ಸೇರಿದ ಇಬ್ಬರು ಪ್ರತಿಭೆಗಳನ್ನು ಗುರುತಿಸಿದ್ದೇವೆ. ಮೊದಲೇ ನಿರ್ಧರಿಸಿದಂತೆ‌ ಈ ಬಾರಿ‌ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. 13 ಮಂದಿ‌ ಮಹಿಳೆಯರನ್ನು ಈ ಸಲ ಆಯ್ಕೆ‌‌ ಮಾಡಲಾಗಿದೆ” ಎಂದು ತಿಳಿಸಿದರು.

“ಪ್ರಶಸ್ತಿ ಪುರಸ್ಕೃತರಿಗೆ 25 ಗ್ರಾಂ ಚಿನ್ನ, 5 ಲಕ್ಷ ರೂ ನಗದು, ಪ್ರಮಾಣಪತ್ರದ ಜೊತೆಗೆ ಫಲಕಗಳನ್ನು ನೀಡಿ ಗೌರವಿಸಲಾಗುವುದು. ನವೆಂಬರ್ 1ರಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಧಕರ ಸನ್ಮಾನ ನಡೆಯಲಿದೆ. ಕರ್ನಾಟಕ ರತ್ನ ಪ್ರಶಸ್ತಿ ಪಡೆದವರಿಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ಕಾರ್ಯಕ್ರಮ ಏರ್ಪಡಿಸಿ ಗೌರವಿಸಲಾಗುವುದು” ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಮಾಹಿತಿ:

ಕ್ಷೇತ್ರ: ಸಾಹಿತ್ಯ (ಹೆಸರು ಹಾಗೂ ಜಿಲ್ಲೆ)
ಪ್ರೊ.ರಾಜೇಂದ್ರ ಚೆನ್ನಿ – ಶಿವಮೊಗ್ಗ
ತುಂಬಾಡಿ ರಾಮಯ್ಯ – ತುಮಕೂರು
ಪ್ರೊ.ಆರ್.ಸುನಂದಮ್ಮ – ಚಿಕ್ಕಬಳ್ಳಾಪುರ
ಡಾ.ಎಚ್.ಎಲ್.ಪುಷ್ಪ – ತುಮಕೂರು
ರಹಮತ್ ತರೀಕೆರೆ – ಚಿಕ್ಕಮಗಳೂರು
ಹ.ಮ.ಪೂಜಾರ – ವಿಜಯಪುರ

ಕ್ಷೇತ್ರ: ಜಾನಪದ (ಹೆಸರು ಹಾಗೂ ಜಿಲ್ಲೆ)
ಬಸಪ್ಪ ಭರಮಪ್ಪ ಚೌಡಿ – ಕೊಪ್ಪಳ
ಬಿ.ಟಾಕಪ್ಪ ಕಣ್ಣೂರು – ಶಿವಮೊಗ್ಗ
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೊಳ – ಬೆಳಗಾವಿ
ಹನುಮಂತಪ್ಪ ಮಾರಪ್ಪ, ಚೀಳಂಗಿ – ಚಿತ್ರದುರ್ಗ
ಎಂ.ತೋಪಣ್ಣ – ಕೋಲಾರ
ಸೋಮಣ್ಣ ದುಂಡಪ್ಪ ಧನಗೊಂಡ – ವಿಜಯಪುರ
ಶ್ರೀಮತಿ ಸಿಂಧು ಗುಜರನ್ – ದಕ್ಷಿಣ ಕನ್ನಡ
ಎಲ್.ಮಹದೇವಪ್ಪ ಉಡಿಗಾಲ – ಮೈಸೂರು

ಕ್ಷೇತ್ರ: ಸಂಗೀತ (ಹೆಸರು ಹಾಗೂ ಜಿಲ್ಲೆ)
ದೇವೆಂದ್ರಕುಮಾರ ಪತ್ತಾರ್ – ಕೊಪ್ಪಳ
ಮಡಿವಾಳಯ್ಯ, ಸಾಲಿ – ಬೀದರ್

ಕ್ಷೇತ್ರ: ನೃತ್ಯ
ಪ್ರೊ.ಕೆ.ರಾಮಮೂರ್ತಿ ರಾವ್ – ಮೈಸೂರು

ಕ್ಷೇತ್ರ: ಚಲನಚಿತ್ರ / ಕಿರುತೆರೆ
ಪ್ರಕಾಶ್ ರಾಜ್ – ದಕ್ಷಿಣ ಕನ್ನಡ
ಶ್ರೀಮತಿ ವಿಜಯಲಕ್ಷ್ಮೀ ಸಿಂಗ್ – ಕೊಡಗು

ಕ್ಷೇತ್ರ: ಆಡಳಿತ
ಹೆಚ್.ಸಿದ್ದಯ್ಯ ಭಾ.ಆ.ಸೇ., (ನಿ) – ಬೆಂಗಳೂರು ದಕ್ಷಿಣ(ರಾಮನಗರ)

ಕ್ಷೇತ್ರ: ವೈದ್ಯಕೀಯ
ಡಾ.ಆಲಮ್ಮ ಮಾರಣ್ಯ – ತುಮಕೂರು
ಡಾ.ಜಯರಂಗನಾಥ್ – ಬೆಂಗಳೂರು ಗ್ರಾಮಾಂತರ

ಕ್ಷೇತ್ರ: ಸಮಾಜಸೇವೆ
ಶ್ರೀಮತಿ ಸೂಲಗಿತ್ತಿ ಈರಮ್ಮ – ವಿಜಯನಗರ
ಶ್ರೀಮತಿ ಫಕ್ಕೀರಿ – ಬೆಂಗಳೂರು ಗ್ರಾಮಾಂತರ
ಶ್ರೀಮತಿ ಕೋರಿನ್ ಆಂಟೊನಿಯಟ್ ರಸ್ಕಿನಾ – ದಕ್ಷಿಣ ಕನ್ನಡ
ಡಾ.ಎನ್.ಸೀತಾರಾಮ ಶೆಟ್ಟಿ – ಉಡುಪಿ
ಕೋಣಂದೂರು ಲಿಂಗಪ್ಪ – ಶಿವಮೊಗ್ಗ

ಕ್ಷೇತ್ರ: ಸಂಕೀರ್ಣ
ಉಮೇಶ ಪಂಬದ – ದಕ್ಷಿಣ ಕನ್ನಡ
ಡಾ.ರವೀಂದ್ರ ಕೋರಿಶೆಟ್ಟರ್ – ಧಾರವಾಡ
ಕೆ.ದಿನೇಶ್ – ಬೆಂಗಳೂರು
ಶಾಂತರಾಜು – ತುಮಕೂರು
ಜಾಫರ್ ಮೊಹಿಯುದ್ದೀನ್ – ರಾಯಚೂರು
ಪೆನ್ನ ಒಬಳಯ್ಯ – ಬೆಂಗಳೂರು ಗ್ರಾಮಾಂತರ
ಶ್ರೀಮತಿ ಶಾಂತಿ ಬಾಯಿ.ಕೆ – ಬಳ್ಳಾರಿ
ಪುಂಡಲೀಕ ಶಾಸ್ತ್ರೀ (ಬುಡಬುಡಕೆ) – ಬೆಳಗಾವಿ

ಕ್ಷೇತ್ರ: ಹೊರನಾಡು / ಹೊರದೇಶ
ಜಕರಿಯ ಬಜಪೆ – ಸೌದಿ
ಪಿ.ವಿ.ಶೆಟ್ಟಿ – ಮುಂಬೈ

ಕ್ಷೇತ್ರ: ಪರಿಸರ
ರಾಮೇಗೌಡ – ಚಾಮರಾಜನಗರ
ಮಲ್ಲಿಕಾರ್ಜುನ ನಿಂಗಪ್ಪ – ಯಾದಗಿರಿ
ಕ್ಷೇತ್ರ: ಕೃಷಿ
ಎಂ.ಸಿ.ರಂಗಸ್ವಾಮಿ – ಹಾವೇರಿ
ಡಾ.ಎಸ್.ವಿ.ಹಿತ್ತಲಮನಿ – ಹಾಸನ

ಕ್ಷೇತ್ರ: ಮಾಧ್ಯಮ
ಕೆ.ಸುಬ್ರಮಣ್ಯ – ಬೆಂಗಳೂರು
ಅಂಶಿ ಪ್ರಸನ್ನ ಕುಮಾರ್ – ಮೈಸೂರು
ಬಿ.ಎಂ.ಹನೀಫ್ – ದಕ್ಷಿಣ ಕನ್ನಡ
ಎಂ.ಸಿದ್ದರಾಜು – ಮಂಡ್ಯ

ಕ್ಷೇತ್ರ: ವಿಜ್ಞಾನ / ತಂತ್ರಜ್ಞಾನ
ರಾಮಯ್ಯ – ಚಿಕ್ಕಬಳ್ಳಾಪುರ
ಏರ್ ಮಾರ್ಷಲ್ ಫಿಲಿಪ್ ರಾಜಕುಮಾರ್ – ದಾವಣಗೆರೆ
ಡಾ.ಆರ್.ವಿ.ನಾಡಗೌಡ – ಗದಗ
ಕ್ಷೇತ್ರ: ಸಹಕಾರ
ಶೇಖರಗೌಡ ವಿ.ಮಾಲಿಪಾಟೀಲ್ – ಕೊಪ್ಪಳ

ಕ್ಷೇತ್ರ: ಯಕ್ಷಗಾನ
ಕೋಟ ಸುರೇಶ ಬಂಗೇರ – ಉಡುಪಿ
ಐರಬೈಲ್ ಆನಂದ ಶೆಟ್ಟಿ – ಉಡುಪಿ
ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ.ಹೆಗಡೆ) – ಉತ್ತರ ಕನ್ನಡ
ಕ್ಷೇತ್ರ: ಬಯಲಾಟ
ಗುಂಡೂರಾಜ್ – ಹಾಸನ

ಕ್ಷೇತ್ರ: ರಂಗಭೂಮಿ
ಹೆಚ್.ಎಂ.ಪರಮಶಿವಯ್ಯ – ಬೆಂಗಳೂರು ದಕ್ಷಿಣ (ರಾಮನಗರ)
ಎಲ್.ಬಿ.ಶೇಖ್ (ಮಾಸ್ತರ್) – ವಿಜಯಪುರ
ಬಂಗಾರಪ್ಪ ಖುದಾನ್‌ಪುರ – ಬೆಂಗಳೂರು
ಮೈಮ್ ರಮೇಶ್ – ದಕ್ಷಿಣ ಕನ್ನಡ
ಶ್ರೀಮತಿ ಡಿ. ರತ್ನಮ್ಮ ದೇಸಾಯಿ – ರಾಯಚೂರು

ಕ್ಷೇತ್ರ: ಶಿಕ್ಷಣ
ಡಾ.ಎಂ.ಆರ್.ಜಯರಾಮ್ – ಬೆಂಗಳೂರು
ಡಾ.ಎನ್.ಎಸ್.ರಾಮೇಗೌಡ – ಮೈಸೂರು
ಎಸ್.ಬಿ.ಹೊಸಮನಿ – ಕಲಬುರಗಿ
ಶ್ರೀಮತಿ ರಾಜ್ ಶ್ರೀ ನಾಗರಾಜು – ಬೆಳಗಾವಿ

ಕ್ಷೇತ್ರ: ಕ್ರೀಡೆ
ಆಶೀಶ್ ಕುಮಾರ್ ಬಲ್ಲಾಳ್ – ಬೆಂಗಳೂರು
ಎಂ.ಯೋಗೇಂದ್ರ – ಮೈಸೂರು
ಡಾ.ಜಬಿನಾ ಎನ್.ಎಂ. (ಯೋಗ) – ಕೊಡಗು

ಕ್ಷೇತ್ರ: ನ್ಯಾಯಾಂಗ
ನ್ಯಾ.ಪಿ.ಬಿ.ಭಜಂತ್ರಿ (ಪವನ್ ಕುಮಾರ್ ಭಜಂತ್ರಿ) – ಬಾಗಲಕೋಟೆ

ಕ್ಷೇತ್ರ: ಶಿಲ್ಪಕಲೆ
ಬಸಣ್ಣ ಮೋನಪ್ಪ ಬಡಿಗೇರ – ಯಾದಗಿರಿ
ನಾಗಲಿಂಗಪ್ಪ, ಜಿ.ಗಂಗೂರ – ಬಾಗಲಕೋಟೆ

ಕ್ಷೇತ್ರ: ಚಿತ್ರಕಲೆ
ಬಿ.ಮಾರುತಿ – ವಿಜಯನಗರ

ಕ್ಷೇತ್ರ: ಕರಕುಶಲ
ಎಲ್.ಹೇಮಾಶೇಖರ್ – ಮೈಸೂರು

sambrama prabha editor suresh kt

LEAVE A REPLY

Please enter your comment!
Please enter your name here