• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಇಂದಿನಿಂದ ಬೆಂಗಳೂರಿನಲ್ಲಿ ‘ಒಡಿಶಾ ಪರಬ್’; ಒಡಿಶಾ ಡಿಸಿಎಂ ಪ್ರವತಿ ಪರಿದಾ ಚಾಲನೆ

Sambrama Prabha News by Sambrama Prabha News
November 15, 2025
in Home, Latest News
0
ಇಂದಿನಿಂದ ಬೆಂಗಳೂರಿನಲ್ಲಿ ‘ಒಡಿಶಾ ಪರಬ್’; ಒಡಿಶಾ ಡಿಸಿಎಂ ಪ್ರವತಿ ಪರಿದಾ ಚಾಲನೆ

Updated By: Priyalachhi

ಬೆಂಗಳೂರು: ಒಡಿಶಾದ ಕಲೆ, ಸಂಸ್ಕೃತಿ ಹಾಗೂ ಪ್ರವಾಸೋದ್ಯಮವನ್ನು ಪರಿಚಯಿಸುವ ಒಡಿಶಾ ಪರಬ್ (ಹಬ್ಬ) ಕ್ಕೆ ಒಡಿಶಾ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರಿಂದ ಅದ್ಧೂರಿ ಚಾಲನೆ ದೊರೆತಿದೆ. ಬೆಂಗಳೂರು ದಿ ಲಲಿತ್ ಅಶೋಕ್ ಹೋಟೆಲ್​​ನಲ್ಲಿ ಇಂದಿನಿಂದ ನವೆಂಬರ್​ 17ರ ವರೆಗೆ ನಡೆಯಲಿದೆ.

ಒಡಿಶಾದ ಪ್ರವಾಸೋದ್ಯಮ ಇಲಾಖೆಯು ಆಯೋಜಿಸಿರುವ ಮೂರು ದಿನಗಳ ಒಡಿಶಾ ಪರಬ್​ನಲ್ಲಿ ಅಲ್ಲಿನ ಸಂಸ್ಕೃತಿ ಪರಂಪರೆ, ಆಹಾರ ಪದ್ಧತಿ ಹಾಗೂ ವೈವಿಧ್ಯಮಯ ಕರಕುಶಲ ವಸ್ತುಗಳ ಪ್ರದರ್ಶನ ಇರಲಿದೆ. ಒಡಿಸ್ಸಿ, ಗೋಟಿಪುವಾ, ಛೌ, ಸಂಬಲ್ ಪುರಿ ಮತ್ತು ಇನ್ನಿತರ ನೃತ್ಯ ಪ್ರಕಾರಗಳು ಒಳಗೊಂಡಂತೆ ಶಾಸ್ತ್ರೀಯ ಹಾಗೂ ಜಾನಪದ ಸಂಪ್ರದಾಯ ಬಿಂಬಿಸುವ ಪ್ರದರ್ಶನಗಳು ನಡೆಯಲಿವೆ ಎಂದು ಒಡಿಶಾ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.

ಪ್ರವಾಸಿಗರನ್ನು ಆಕರ್ಷಿಸುವುದೇ ನಮ್ಮ ಧ್ಯೇಯ: ಬೆಂಗಳೂರಿನಲ್ಲಿ ಸುಮಾರು 15 ಲಕ್ಷ ಮಂದಿ ಒಡಿಶಾದ ಜನರಿದ್ದಾರೆ. ನಮ್ಮ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳಿವೆ. ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸಲು, ರಾಷ್ಟ್ರಮಟ್ಟದಲ್ಲಿ ತಿಳಿಸಲು ಈ ಬಾರಿ ಬೆಂಗಳೂರಿನಲ್ಲಿ ಒಡಿಶಾ ಪರಬ್ ಆಚರಿಸಲಾಗುತ್ತಿದೆ. ಇಲ್ಲಿನ ಜನರಿಗೆ ಒಡಿಶಾ ಸಾಂಸ್ಕೃತಿಕ ಹಾಗೂ ಪ್ರವಾಸಿ ಸ್ಥಳಗಳ ಪರಿಚಯಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವುದೇ ನಮ್ಮ ಧ್ಯೇಯ ಎಂದರು.

ಒಡಿಶಾ ಸಮೃದ್ಧ ಸಂಸ್ಕೃತಿ, ಸಂಪ್ರದಾಯಗಳ ಆಚರಣೆ, ಪ್ರವಾಸಿ ತಾಣಗಳಲ್ಲಿ ಹೂಡಿಕೆ ರಾಜ್ಯದ ಪಾಕಶೈಲಿ, ಹಸ್ತವಸ್ತ್ರ, ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ. ಒಡಿಶಾದ ಸಂಬಲ್ ಪುರಿ ಟೈ, ಮತ್ತು ಡೈ ಸೇರಿ ಟಸ್ಸರ್ ಹಾಗೂ ರೇಷ್ಮೆ ಬಟ್ಟೆಗಳು, ಬಸ್ತ್ರಾಲಯ ತರಹದ ಬಟ್ಟೆಗಳು, ವಿಶಿಷ್ಠ ಕರಕುಶಲ ವಸ್ತುಗಳಾದ ಧೆಂಕನಲ್ನ ಧೋಕ್ರಾ, ಪುರಿಯ ಪಟ್ಟಚಿತ್ರಗಳು, ಸೆಣಬಿನ ಕರುಕುಶಲ ವಸ್ತುಗಳು, ನಬರಂಗಪುರದ ಬುಡಕಟ್ಟು ಆಭರಣಗಳು ಸೇರಿದಂತೆ 30ಕ್ಕೂ ಹೆಚ್ಚು ತರಹೇವಾರಿ ವಸ್ತುಗಳನ್ನು ಒಡಿಶಾ ಪರಬ್​ನಲ್ಲಿ ಅನಾವರಣಗೊಳಿಸಲಾವುದು ಎಂದು ಪರಿದಾ ಅವರು ತಿಳಿಸಿದರು.

ಮೋದಿ ಮೇಲೆ ನಂಬಿಕೆಯಿಟ್ಟು ಎನ್​ಡಿಎ ಗೆಲ್ಲಿಸಿದ್ದಾರೆ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್​ಡಿಎ ಅಮೋಘ ಗೆಲುವು ಸಂಬಂಧ ಪ್ರತಿಕ್ರಿಯಿಸಿದ ಅವರು, ಬಿಹಾರದ ಪ್ರಗತಿ ಕಂಡು ಮತದಾರರು ಎನ್​ಡಿಎ ಮೈತ್ರಿಕೂಟವನ್ನು ಗೆಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನಂಬಿಕೆ ಇಡುವ ಜೊತೆಗೆ, ಕೇಂದ್ರ ಹಾಗೂ ಬಿಹಾರದಲ್ಲಿ ಡಬಲ್ ಇಂಜಿನ್ ಸರ್ಕಾರಗಳು ವಿಜಯಕ್ಕೆ ಪೂರಕವಾಗಿವೆ ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತಗಳ್ಳತನ ನಡೆಯುವುದು ಅಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags: Odisha Parabಡಿಸಿಎಂ ಪ್ರವತಿ ಪರಿದಾ ಚಾಲನೆ
Previous Post

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಗೊಂದಲಕ್ಕೆ ಹೈಕಮಾಂಡ್ ಸ್ಪಷ್ಟತೆ ಸಿಗುವ ವಿಶ್ವಾಸವಿದೆ: ಬಿ.ವೈ. ವಿಜಯೇಂದ್ರ

Next Post

ಪಾಲಥೈ ಪೋಕ್ಸೋ ಪ್ರಕರಣ; ಬಿಜೆಪಿ ನಾಯಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​

Next Post
ಪಾಲಥೈ ಪೋಕ್ಸೋ ಪ್ರಕರಣ; ಬಿಜೆಪಿ ನಾಯಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​

ಪಾಲಥೈ ಪೋಕ್ಸೋ ಪ್ರಕರಣ; ಬಿಜೆಪಿ ನಾಯಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.