• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಹರಿಯಾಣದ 5 ​​ಶಾಸಕರನ್ನು ಅಮಾನತುಗೊಳಿಸಿದ ಕಾಂಗ್ರೆಸ್

Sambrama Prabha News by Sambrama Prabha News
April 16, 2026
in Politics
0
ಹರಿಯಾಣದ 5 ​​ಶಾಸಕರನ್ನು ಅಮಾನತುಗೊಳಿಸಿದ ಕಾಂಗ್ರೆಸ್

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ ಕಾಂಗ್ರೆಸ್ ಗುರುವಾರ ಹರಿಯಾಣದ ಐದು ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

ಪಕ್ಷದ ಶಿಸ್ತು ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಐವರು ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಾವ್ ನರೇಂದರ್ ಸಿಂಗ್ ಅವರು ಹೇಳಿದ್ದಾರೆ.

ರಾಜ್ಯ ಶಿಸ್ತು ಸಮಿತಿಯ ಶಿಫಾರಸು ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆಯ ನಂತರ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಕ್ಷವು ಈ ಹಿಂದೆ ಅಧಿಕೃತ ವಿಪ್ ಅನ್ನು ಧಿಕ್ಕರಿಸಿದ್ದಕ್ಕಾಗಿ ಐದು ಶಾಸಕರನ್ನು ಹೆಸರಿಸಿತ್ತು. ನರೈಂಗರ್ ಶಾಸಕಿ ಶಲ್ಲಿ ಚೌಧರಿ, ಸಧೌರಾ ಶಾಸಕಿ ರೇಣು ಬಾಲಾ, ಪುನ್ಹಾನಾ ಶಾಸಕ ಮೊಹಮ್ಮದ್ ಇಲ್ಯಾಸ್, ಹಾಥಿನ್ ಶಾಸಕ ಮೊಹಮ್ಮದ್ ಇಸ್ರೇಲ್ ಮತ್ತು ರತಿಯಾ ಶಾಸಕ ಜರ್ನೈಲ್ ಸಿಂಗ್ ಅವರನ್ನು ಈಗ ಅಮಾನತುಗೊಳಿಸಿದೆ.

ಹರಿಯಾಣ ಕಾಂಗ್ರೆಸ್‌ನ ಶಿಸ್ತು ಸಮಿತಿ ಇತ್ತೀಚೆಗೆ ಐವರು ಶಾಸಕರನ್ನು ಅಮಾನತುಗೊಳಿಸಲು ಶಿಫಾರಸು ಮಾಡಿತ್ತು.

Tags: ಕಾಂಗ್ರೆಸ್
Previous Post

ಕಾಂಗ್ರೆಸ್ ಅವಧಿಯಲ್ಲಿ ಆಂಧ್ರ ವಿಭಜನೆ ಭಾರತ-ಪಾಕ್ ವಿಭಜನೆಗಿಂತ ಕೆಟ್ಟದಾಗಿತ್ತು- ತೇಜಸ್ವಿ ಸೂರ್ಯ ವಾಗ್ದಾಳಿ

Next Post

ದೆಹಲಿ ವಿಮಾನ ನಿಲ್ದಾಣ: ವಿಮಾನಗಳು ಪರಸ್ಪರ ಡಿಕ್ಕಿ

Next Post
ದೆಹಲಿ ವಿಮಾನ ನಿಲ್ದಾಣ: ವಿಮಾನಗಳು ಪರಸ್ಪರ ಡಿಕ್ಕಿ

ದೆಹಲಿ ವಿಮಾನ ನಿಲ್ದಾಣ: ವಿಮಾನಗಳು ಪರಸ್ಪರ ಡಿಕ್ಕಿ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.