• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಕೇಂದ್ರ ಸರ್ಕಾರದಿಂದ ಪಡಿತರ ಕೊಟ್ಟಿದ್ದು ನಾವು: ಹೆಚ್​ ಡಿ ಕುಮಾರಸ್ವಾಮಿ

Sambrama Prabha News by Sambrama Prabha News
April 5, 2026
in Home, Latest News, Politics
0
ಕೇಂದ್ರ ಸರ್ಕಾರದಿಂದ ಪಡಿತರ ಕೊಟ್ಟಿದ್ದು ನಾವು: ಹೆಚ್​ ಡಿ ಕುಮಾರಸ್ವಾಮಿ

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ದಾವಣಗೆರೆ: ಕೇಂದ್ರದಿಂದ ಪಡಿತರ ಕೊಟ್ಟಿದ್ದು ನಾವು. ಸಿದ್ದರಾಮಯ್ಯ ಅನ್ನರಾಮಯ್ಯ ಎನ್ನುವುದಕ್ಕಿಂತ ಕನ್ನರಾಮಯ್ಯ ಎನ್ನಬಹುದು ಎಂದು ಕೇಂದ್ರ ಸಚಿವ ಹೆಚ್ ​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾತನಾಡಿದ ಅವರು, 28 ಸಾವಿರ ಕೋಟಿ ಹಣ 15 ಲಕ್ಷ ಮನೆಗಳನ್ನು ಕಟ್ಟಲು ಬೇಕಾಗಿತ್ತು. ಆದರೆ ಈಗ ಅದೇ 15 ಲಕ್ಷ ಮನೆ ಕಟ್ಟಲು 2 ಸಾವಿರ ಕೋಟಿ ಇಟ್ಟಿದ್ದಾರೆ. ಗ್ಯಾಸ್​​​ ಸಿಲಿಂಡರ್​ಗಳ ಪೂರೈಕೆ ಕಷ್ಟ ಇದೆ. ಆದರೆ ಈ ಕಾಂಗ್ರೆಸ್​ ಅವರು ಪ್ರಧಾನಿಗಳು ಪೂರೈಕೆ ಮಾಡುತ್ತಿಲ್ಲ ಎಂದು ಅರೋಪ ಮಾಡುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿನ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವುದು ಗೊತ್ತಿದೆ.‌ ಆದರೆ ಪ್ರಧಾ‌ನಿಗಳು ಬೇರೆ ದೇಶಗಳ ಜೊತೆ ಇಟ್ಟುಕೊಂಡ ಸ್ನೇಹದಿಂದ ಅಲ್ಲಿಂದ ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದಾರೆ. ಹಾರ್ಮುಜ್​ ಜಲಸಂಧಿಯ ಮೂಲಕ ದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ಯಾಸ್ ಆಮದು ಮಾಡಿಕೊಳ್ಳುತ್ತಿದ್ದಾರೆ ಎಂದರು.

ಇದರ ಬಗ್ಗೆ ಸಿಎಂ, ಡಿಸಿಎಂ, ಸುರ್ಜೇವಾಲ ಮಾತನಾಡಿದ್ದು ನೋಡಿದ್ದೆ. ಕೇಂದ್ರದಿಂದ ಬರುವ ಪಡಿತರವನ್ನು ಕೊಟ್ಟು ನಾವು ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ.‌ ಸಿಎಂ ಖುರ್ಚಿ ಕದನ ನಡೆಯಿತ್ತಲೇ ಇವೆ‌.‌ ಕಾರ್ಯಕರ್ತರ ಶಕ್ತಿಯ ಮೇಲೆ 40 ಸೀಟ್ ತೆಗೆದುಕೊಂಡಿದ್ದೇವೆ. ಪ್ರಾದೇಶಿಕ ಪಕ್ಷ ಕಟ್ಟಿ ನೀವು ಗೆಲ್ಲಿಸಿ ನೋಡಿ.‌ ಕುಟುಂಬ ರಾಜಕಾರಣ ಎಂದು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತೀರಿ. ನೀವು ನಿಮ್ಮ ಮಗನನ್ನು ರಾಜಕೀಯಕ್ಕೆ ತರೆತಂದಿದ್ದಕ್ಕೆ ಏನು ಅಂತಾರೆ. ನಿಮ್ಮ‌ ಮಗನನ್ನು ಟ್ರಾನ್ಫರ್ ಮಾಡಿಸಲು, ಬೇರೆ ಬೇರೆ ಕೆಲಸ ಮಾಡಲು ತಂದಿದ್ದೀರಾ ಎಂದು ಪ್ರಶ್ನಿಸಿದರು. ‌

ಅಪ್ಪಯ್ಯ ಅಪ್ಪಯ್ಯ ಎಂದು ಯತೀಂದ್ರ ಸಿದ್ದರಾಮಯ್ಯ ಅಣಕಿಸಿದ ಹೆಚ್​ಡಿಕೆ: ಕಾಂಗ್ರೆಸ್ ಅವರು ಮಾತಿನಲ್ಲಿ ಆಡುವುದೇ ಬೇರೆ, ನಡೆದುಕೊಳ್ಳೋವುದೇ ಬೇರೆ. ಬಿಜೆಪಿ ಪಕ್ಷ ಹಿಂದುತ್ವ, ಕೋಮುವಾದಿ ಪಕ್ಷ ಅದು ಇದು ಅಂತ ಅರೋಪ ಮಾಡುತ್ತಾರೆ. ಆದರೆ ಈ ಬಾರಿ ಎನ್​ಡಿಎ ಅಭ್ಯರ್ಥಿಯಾಗಿ ಸಾಮಾನ್ಯ ಕಾರ್ಯಕರ್ತನನ್ನು ಕಣದಲ್ಲಿ ಇಳಿಸಿದ್ದೇವೆ. ಸಾಮಾನ್ಯ ಕುಟುಂಬದಿಂದ ಬಂದ ಶ್ರೀನಿವಾಸ್​​ ದಾಸಕರಿಯಪ್ಪಗೆ ಟಿಕೆಟ್​​ ನೀಡಿದ್ದೇವೆ. ಆದರೆ ಕಾಂಗ್ರೆಸ್​​ ಮಾಡಿದ್ದು ಏನು?, ಯಾರಿಗೆ ಟಿಕೆಟ್ ನೀಡಿದ್ದಾರೆ?. ನಿತ್ಯ ಕೇಂದ್ರದ ಜೊತೆ ಸಂಘರ್ಷ ಮಾಡಿಕೊಂಡು ರಾಜ್ಯಕ್ಕೆ ಏನು ತರಲಿದ್ದೀರಿ ಹೇಳಿ ಎಂದ ಕೇಂದ್ರ ಸಚಿವರು, ಅಪ್ಪಯ್ಯ ಅಪ್ಪಯ್ಯ ಎಂದು ಯತೀಂದ್ರ ಸಿದ್ದರಾಮಯ್ಯರನ್ನು ಅಣಕಿಸಿದರು.

ಸಿದ್ದರಾಮಯ್ಯನವರು ಜಾತ್ಯತೀತ ನಾಯಕ ಎಂದು ಹೇಳುತ್ತಿದ್ದಾರೆ: ಸಿದ್ದರಾಮಯ್ಯನವರು ಜಾತ್ಯತೀತ ನಾಯಕ ಎಂದು ಹೇಳುತ್ತಿದ್ದಾರೆ. ಅದೇ ಜಾತ್ಯತೀತ ಜನತಾದಳದಲ್ಲಿ‌ ಇದ್ದಾಗ ನೀವು ಏನ್ ಮಾಡಿದ್ದು, ಎಲ್ಲಿ ಹೋದರು. ಅಹಿಂದ‌ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದರು. ಖುರ್ಚಿ ಅಲುಗಾಡಿಗಾದ ಮಾತ್ರ ಅಹಿಂದ ಅಹಿಂದ ಅಂತ ಹೇಳುತ್ತಾರೆ.‌ ಖುರ್ಚಿ ಸರಿಯಾದಾಗ ಅಹಿಂದವನ್ನು ಹಿಂದೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ಸಿದ್ದರಾಮಯ್ಯ ಅವರ ನಾಟಕ ಎಂದು ಟಾಂಗ್ ನೀಡಿದರು.‌

ಎರಡು ಕ್ಷೇತ್ರದ ಉಪಚುನಾವಣೆಯ ಪ್ರಚಾರ ಬಿರುಸು: ಎರಡೂ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಬಿರುಸಿನಿಂದ ಕೂಡಿದೆ. ಕೊನೆಯ ಹಂತಕ್ಕೆ ಚುನಾವಣಾ ಪ್ರಚಾರ ಬಂದಿದೆ. ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಗಳ ಪರವಾಗಿ ರಾಜ್ಯದ ಎಲ್ಲಾ ಮಂತ್ರಿಗಳನ್ನು ನಿಯೋಜ‌ನೆ ಮಾಡಿದ್ದಾರೆ. ವಿಧಾನಸೌದ ಸಂಪೂರ್ಣ ಖಾಲಿ ಖಾಲಿ ಹೊಡೆಯುತ್ತಿದೆ. ಒಂದು ರಾಜ್ಯದ ಸಿಎಂ ತಮ್ಮ ಸರ್ಕಾರದ ಸಾಧನೆ ಹೇಳಿಕೊಂಡು ಹೋಗುತ್ತಿದ್ದಾರೆ. ಒಬ್ಬ ಸಿಎಂಗೆ ಪದಬಳಕೆ ಮೀರಿ ಮಾತನಾಡುತ್ತಿದ್ದಾರೆ. ಈ ಐದು ಗ್ಯಾರಂಟಿ ಹೊರತುಪಡಿಸಿ ಬೇರೆ ಯಾವ ಸಾಧನೆ ಕೂಡ ಮಾಡಿಲ್ಲ. ಇನ್ನು ಕೆಲ ತಿಂಗಳ ನಂತರ ಮೂರು ವರ್ಷ ಪೂರೈಕೆಯಾಗುತ್ತದೆ.

Tags: ಹೆಚ್.ಡಿ.ಕುಮಾರಸ್ವಾಮಿ
Previous Post

ಎಸ್.ಎಸ್.ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಭೇಟಿ ನೀಡಿದ ಜಮೀರ್​​​​​​ ಅಹ್ಮದ್​​​​​ ಖಾನ್

Next Post

ಹಳೆಯ ವಾಹನಗಳಿಗೂ ಹೆಚ್ಎಸ್ಆರ್‌ಪಿ ಅಳವಡಿಕೆ ಕಡ್ಡಾಯ

Next Post
ಹಳೆಯ ವಾಹನಗಳಿಗೂ ಹೆಚ್ಎಸ್ಆರ್‌ಪಿ ಅಳವಡಿಕೆ ಕಡ್ಡಾಯ

ಹಳೆಯ ವಾಹನಗಳಿಗೂ ಹೆಚ್ಎಸ್ಆರ್‌ಪಿ ಅಳವಡಿಕೆ ಕಡ್ಡಾಯ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.