Updated By: Priyalachhi
ಬೆಂಗಳೂರು: “ರಾಜ್ಯದ ಹಲವು ವಿಚಾರಗಳ ಸಂಬಂಧ ಕೇಂದ್ರ ಸಚಿವರ ಭೇಟಿಗೆ ದೆಹಲಿಗೆ ಹೋಗುತ್ತೇನೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಎಸ್.ಎಂ. ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ ಬಳಿಕ ದೆಹಲಿಗೆ ತೆರಳುವ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯಿಸುತ್ತಾ, “ರಾಜ್ಯದ ಹಲವು ವಿಚಾರಗಳ ಬಗ್ಗೆ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದೇನೆ. ಕೇಂದ್ರ ಸಚಿವರ ಭೇಟಿಗಾಗಿ ದೆಹಲಿಗೆ ತೆರಳುತ್ತಿದ್ದೇನೆ” ಎಂದು ತಿಳಿಸಿದರು.
ಮುಂದುವರೆದು, “ಕೇಂದ್ರಕ್ಕೆ ಸರ್ವಪಕ್ಷ ಸಭೆ ಕರೆದೊಯ್ಯಬೇಕು ಅಂತನೂ ಇದ್ದೇವೆ. ಇದರ ಬಗ್ಗೆನೂ ನಾನೂ ಸಿಎಂ ಚರ್ಚೆ ಮಾಡಿದ್ದೇವೆ. ಮೆಕ್ಕೆಜೋಳ, ಕಬ್ಬು ಇತರೆ ವಿಚಾರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆ ಚರ್ಚೆ ಆಗಿದೆ” ಎಂದೂ ತಿಳಿಸಿದರು.
“ಎಸ್.ಎಂ. ಕೃಷ್ಣಾ ಅವರ ವರ್ಷದ ಕಾರ್ಯಕ್ಕೆ ಇಡೀ ಕುಟುಂಬ ಬಂದಿದ್ದೇವೆ ಎಂದು ಇದೇ ವೇಳೆ ತಿಳಿಸಿದ ಡಿಸಿಎಂ, ಭೂವರಹಾ ಸ್ವಾಮಿ ದೇವಸ್ಥಾನಕ್ಕೆ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ “ನಮಗೆ ಎಲ್ಲಿ ನಂಬಿಕೆ ಇದೆಯೋ ಅಲ್ಲಿಗೆ ಹೋಗುತ್ತೇವೆ. ಎಲ್ಲ ಧರ್ಮಗಳ ಮೇಲೂ ನಮಗೆ ನಂಬಿಕೆ ಇದೆ, ರಾಜಕಾರಣ ಏನಿಲ್ಲ. ಏನಿದ್ದರೂ ಜನರ ಸೇವೆ, ಆಡಳಿತ ಅಷ್ಟೇ” ಎಂದರು.
ಕೊನೆಗೆ, “ಸಿಎಂಗೆ ಊಟಕ್ಕೆ ಕರೆಯುವ ದಿನಾಂಕ ನಿಮಗೆ ಹೇಳುತ್ತೇನೆ. ನಿಮಗೆ ಹೇಳದೆ ದಿನಾಂಕ ನಿಗದಿ ಮಾಡಕ್ಕಾಗುತ್ತಾ” ಎಂದು ಪ್ರಶ್ನಿಸಿದರು.
