ರಾಜಕೀಯರಾಜ್ಯ

ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳಿಗೆ ಒಳ ಏಟಿನ ಭೀತಿ!

Fear of internal conflict for Congress-BJP candidates!

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಏಪ್ರಿಲ್ 26 ಮತ್ತು ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ (Lok Sabha Election 2024) ರಾಜ್ಯದ ಮೂರೂ ಪಕ್ಷಗಳು ಭಾರಿ ಉತ್ಸಾಹದಿಂದ ತಯಾರಿ ಶುರು ಮಾಡಿವೆ. ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುಂದೆ ದಿನವೂ ಉತ್ಸವದ ವಾತಾವರಣ ಕಂಡು ಬರುತ್ತಿದೆ. ಇತ್ತ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಇರುವ ಕಾಂಗ್ರೆಸ್ ಕಚೇರಿಯಲ್ಲೂ ಹಬ್ಬದ ವಾತಾವರಣ ಇದೆ. ಇನ್ನು ಜೆಡಿಎಸ್‌ನ ಜೆಪಿ ಭವನದಲ್ಲಿ ಕಳೆದ ವಿಧಾನಸಭಾ ಚುನಾವಣೆ (Vidhana Soudha rounds) ವೇಳೆ ಆದ ಸೋಲಿನ ಕಹಿ ಮರೆಯಲು ಯೋಜನೆ ರೂಪಿಸಲಾಗುತ್ತಿದೆ.

ಈಗಾಗಲೇ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 20 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದೆ. ಮೂರು ಕ್ಷೇತ್ರ ಪಡೆದಿರುವ ಜೆಡಿಎಸ್‌ಗೆ ಮಂಡ್ಯದಲ್ಲಿ ಪುಟ್ಟರಾಜು ವರ್ಕೌಟ್ ಆಗುವಂತೆ ಕಾಣಿಸುತ್ತಿಲ್ಲ. ಹೀಗಾಗಿ ಯುದ್ಧಕ್ಕೂ ಮೊದಲೇ ಪುಟ್ಟರಾಜು ಶಸ್ತ್ರ ತ್ಯಾಗ ಮಾಡಿ ಕುಮಾರಸ್ವಾಮಿ ನೀನೇ ಬರಬೇಕು ಅಂತ ಕೂಗತೊಡಗಿದ್ದಾರೆ. ಇನ್ನು “ರೆಬಲ್ ಲೇಡಿʼ ಸುಮಲತಾ ಈ ಮಾತು ಕೇಳಿದ ತಕ್ಷಣ ಆಲರ್ಟ್ ಆಗಿದ್ದಾರೆ. ಕಾಂಗ್ರೆಸ್ 24 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿ ಆರು ಮಂದಿ ಮಹಿಳೆ ಹಾಗೂ ಯುವಕರಿಗೆ ಮಣೆ ಹಾಕುವ ಕೆಲಸ ಮಾಡಿ ಹೊಸ ಹಾದಿ ತುಳಿದಿದೆ. ಆದರೆ ಕಾಂಗ್ರೆಸ್‌ ಕುಟುಂಬ ರಾಜಕಾರಣಕ್ಕೆ ಅತಿಯಾಗಿ ಜೋತು ಬಿದ್ದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾನ್ಯ ಕಾರ್ಯಕರ್ತರ ಮನಸ್ಸಿಗೂ ಇದರು ಬೇಸರ ತರಿಸಿದೆ.

ಕಣದಲ್ಲಿರುವ ಅಭ್ಯರ್ಥಿಗಳಿಗೆ ಒಳಪೆಟ್ಟಿನ ಭಯ

ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಎರಡೂ ಪಕ್ಷಗಳ ಕಾರ್ಯಕರ್ತರ ಅಸಮಾಧಾನ ಬಹಿರಂಗಗೊಂಡಿದೆ. ಎರಡು ಮೂರು ವರ್ಷಗಳಿಂದ ಕೆಲಸ ಮಾಡಿದ್ದ ಆಕಾಂಕ್ಷಿಗಳಿಗೆ ಟಿಕೆಟ್ ಕೊಡದೇ ಕುಟುಂಬಕ್ಕೆ ಟಿಕೆಟ್ ಕೊಟ್ಟಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಪಕ್ಷದ ತಳ ಹಂತದ ನಾಯಕರ ಸಿಟ್ಟು ವ್ಯಕ್ತವಾಗುತ್ತಿದೆ.
ಇತ್ತ ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಟಿಕೆಟ್ ತಪ್ಪಿರುವ ಸದಾನಂದ ಗೌಡ, ಈಶ್ವರಪ್ಪ, ನಳೀನ್ ಕುಮಾರ್ ಕಟೀಲ್, ರೇಣುಕಾಚಾರ್ಯ, ಸಂಗಣ್ಣ ಕರಡಿ, ಪ್ರಭು ಚೌಹಾಣ್,‌ ರಮೇಶ್ ಕತ್ತಿ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಆಯಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಒಳ ಪೆಟ್ಟಿನ ಭಯ ಕಾಡುತ್ತಿದೆ. ಇನ್ನು ಜೆಡಿಎಸ್‌ಗೆ ಮಂಡ್ಯದಲ್ಲಿ ಸುಮಲತಾ, ಹಾಸನದಲ್ಲಿ ಪ್ರೀತಂ ಗೌಡ ಮತ್ತು ಕೋಲಾರದಲ್ಲಿ ಮುನಿಸ್ವಾಮಿ ಅವರ ಒಳಪೆಟ್ಟಿನ ಭಯ ಕಾಡುತ್ತಿದೆ.

 

ಇದನ್ನೂ ಓದಿ...

Back to top button
>