ರಾಜಕೀಯರಾಜ್ಯಸಿನಿಮಾ ಸುದ್ದಿ

ಇಂದು ದರ್ಶನ್‌ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ

Today, Darshan is a loud campaign for BJP candidates

ಪ್ರಿಯಲಚ್ಛಿ sambramaprabha
ರಾಜ್ಯದಲ್ಲಿ ಚುನಾವಣೆ ಪ್ರಚಾರ ರಂಗು ಹೆಚ್ಚಿದ್ದು, ಸಿನಿಮಾ ಸೆಲೆಬ್ರಿಟಿಗಳು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಚಂದನವನದ ಸ್ಟಾರ್‌ ನಟರಾದ ಕಿಚ್ಚ ಸುದೀಪ್‌, ದರ್ಶನ್‌ ಈಗಾಗಲೇ ರಾಜ್ಯದ ಹಲವೆಡೆ ಸುತ್ತಾಡುತ್ತಿದ್ದಾರೆ. ಆ ಪೈಕಿ ಇಂದು (ಏ. 28) ನಟ ದರ್ಶನ್‌ ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಇದೀಗ ಶುಕ್ರವಾರದ ಅವರ ಪ್ರಚಾರದ ರೂಪುರೇಷೆಯನ್ನು ಬಿಜೆಪಿ ಪ್ರಕಟಿಸಿದ್ದು, ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೊತ್ತಿಗೆ ದರ್ಶನ್‌ ಅವರು ಹಾಜರಿರಲಿದ್ದಾರೆ ಎಂಬುದನ್ನು ತಿಳಿಸಿದೆ. ಆ ಪ್ರವಾಸದ ಪಟ್ಟಿ ಹೀಗಿದೆ.

ಹೀಗಿದೆ ದರ್ಶನ್‌ ಪ್ರಚಾರ ಪ್ರವಾಸ ವಿವರ
ಬೆಳಗ್ಗೆ 10 ಗಂಟೆಗೆ ಕೋಲಾರದ ಕೆಜಿಎಫ್‌ನಲ್ಲಿ ರೋಡ್‌ ಶೋ
ಬೆಳಗ್ಗೆ 11 ಗಂಟೆಗೆ ಕೋಲಾರದ ಬಂಗಾರಪೇಟೆಯಲ್ಲಿ ರೋಡ್‌ ಶೋ
ಮಧ್ಯಾಹ್ನ 12 ಗಂಟೆಗೆ ಕೋಲಾರ ಕ್ಷೇತ್ರದಲ್ಲಿ ರೋಡ್‌ ಶೋ
ಮಧ್ಯಾಹ್ನ 3 ಗಂಟೆಗೆ ಕೋಲಾರದ ಮಾಲೂರಿನಲ್ಲಿ ರೋಡ್‌ ಶೋ
ಸಂಜೆ 4 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ರೋಡ್‌ ಶೋ
ಸಂಜೆ 5 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಮತ್ತು ದೇವನಹಳ್ಳಿ ಕ್ಷೇತ್ರದಲ್ಲಿ ರೋಡ್‌ ಶೋ
ಸಂಜೆ 6 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದಲ್ಲಿ ರೋಡ್‌ ಶೋ
ಸಂಜೆ 7 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾಪುರ ಕ್ಷೇತ್ರದಲ್ಲಿ ರೋಡ್‌ ಶೋ
ರಾತ್ರಿ 8 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಲಿದ್ದಾರೆ.
ಎತ್ತಿನ ಗಾಡಿ ಓಡಿಸಿ ಪ್ರಚಾರ

ಶ್ರೀರಂಗಪಟ್ಟಣದ ಬಿಜೆಪಿ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ ಪರವಾಗಿ ಗುರುವಾರವಷ್ಟೇ ಅಬ್ಬರದ ಪ್ರಚಾರ ನಡೆಸಿದ ದರ್ಶನ್‌, ಎತ್ತಿನಗಾಡಿಯಲ್ಲಿ ಸಂಚರಿಸಿ ಪ್ರಚಾರ ಮಾಡಿದರು. ಬಳಿಕ ತೆರೆದ ವಾಹನದಲ್ಲಿ ಕ್ಷೇತ್ರದ ಹಳ್ಳಿಗಳಾದ ಬೆಳಗೂಳ, ಹುಲಿಕೆರೆ, ಹೊಸ ಆನಂದೂರು, ಹೊಸಹಳ್ಳಿ, ಮೇಳಾಪುರ, ದೊಡ್ಡಪಾಳ್ಯ ಸೇರಿ ಹತ್ತು ಹಲವು ಹಳ್ಳಿಗಳಿಗೆ ತೆರಳಿ ಸಚ್ಚಿದಾನಂದ ಅವರಿಗಾಗಿ ಮತಯಾಚನೆ ನಡೆಸಿದರು.

ಇದನ್ನೂ ಓದಿ...

Back to top button
>